ಮಂಗಳೂರು, ಏ. 24 : ಪ್ರಾರ್ಥನಾ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ| ಆರ್. ಧನರಾಜ್ ನಿರ್ಮಾಣದೊಂದಿಗೆ ನಿರ್ದೇಶಿಸುತ್ತಿರುವ ‘ ಕೊರಗ್ಲಾ ತನಿಯಾ’ ಮತ್ತು ‘ಕನ’ ತುಳು ಚಿತ್ರಗಳ ಮುಹೂರ್ತ ಕಾರ್ಯಕ್ರಮ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆಯಿತು.
ಕೊರಗ್ಲಾ ತನಿಯ ಚಿತ್ರಕ್ಕೆ ಶಾಸಕರಾದ ಸಿ ಬಿ ಸುರೇಶ್ ಅವರು ಕ್ಯಾಮರಾ ಚಾಲನೆಗೈದರು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಡಳಿತ ನಿರ್ದೇಶಕ ಎ ಜೆ ಶೆಟ್ಟಿ ಅವರು ಕ್ಯಾಪ್ ಮಾಡಿದರು. ಕನ ಸಿನಿಮಾಕ್ಕೆ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಕ್ಯಾಮರಾ ಚಾಲನೆ ನೀಡಿದರು. ಸುಮನ್ ತಲ್ವಾರ್ ಅವರು ಆರಂಭಫಲಕ ತೋರಿಸಿದರು.
ಬಳಿಕ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಟ ಸುಮನ್ ತಲ್ವಾರ್ ಅವರು ಮಾತನಾಡಿ, ಕಾಂತಾರ ಸಿನಿಮಾ ಬಂದ ಮೇಲೆ ಅನೇಕರು ಇಂತಹ ಪ್ರಯತ್ನಕ್ಕೆ ಕೈಹಾಕುತ್ತಿದ್ದಾರೆ. ನಿರ್ಮಾಪಕರಾದ ಧನರಾಜ್ ಅವರು ಕೊರಗ್ಲಾ ತನಿಯಾ’, ‘ಕನ’ ಚಿತ್ರ ದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ನಾನೂ ಕೂಡ ಇದರಲ್ಲಿ ಒಂದು ಪಾತ್ರ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಜೆಡಿಎಸ್ ಮುಖಂಡ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್ ಬಾಬು ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಿರ್ದೇಶಕ ಆರ್ ಧನರಾಜ್ ಅವರು ‘ ಕೊರಗ್ಲಾ ತನಿಯಾ’ಮತ್ತು ‘ಕನ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಕಥೆ ಮತ್ತು ಹಾಡುಗಳು ಮೂಲಕ ಸಮಾಜವನ್ನು ತಿದ್ದುವ ಕೆಲಸ ಆಗಲಿ ಎಂದರು.
ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಡಾ. ಆರ್. ಧನರಾಜ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಧನರಾಜ್ ಅವರ ಮಾತೃಶ್ರೀ ಕೆ. ಪುಷ್ಪಾ, ಜೆಪಿ, ಗಂಗಾಧರ ಕಿರೋಡಿಯನ್, ದ.ಕ. ಜಿಲ್ಲಾ ಜಾನಪದ ಪರಿಷತ್ ನ ಅಧ್ಯಕ್ಷ ಪಮ್ಮಿ ಕೊಡಿಯಾಲ್ಬೈಲ್, ವಕೀಲ ಮೋಹನ್ ದಾಸ್ ರೈ ಸುಧಾಕರ್ ಮೊಯಿಲಿ, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಅರ್ಚನ ಶೆಟ್ಟಿ, ನಾಗೇಶ್ ಶೆಟ್ಟಿ ಮುಂಬೈ, ಅನಿಲ್, ರಾಮಣ್ಣ, ಸಂಜೀವ ಮಾಸ್ಟರ್, ಪುರುಷೋತ್ತಮ್, ರಾಜೇಶ್ ಕೊಚ್ಚಿನ್, ಯುವನಟ ಸಾಜನ್ ಶೆಟ್ಟಿ, ಯುವನಟಿ ಹಿಮಾನಿ ಮತ್ತಿತರರು ಉಪಸ್ಥಿತರಿದ್ದರು. ಆಂಕರ್ ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











