Subscribe to Updates
Get the latest creative news from FooBar about art, design and business.
Author: admin
ಮಂಗಳೂರು, ಜ.20: ನಗರದ ಹೊಯ್ಗೆ ಬಝಾರ್ ನಲ್ಲಿರುವ ಅಲ್ಬುಕರ್ಕ್ & ಸನ್ಸ್ ಹೆಂಚಿನ ಕಾರ್ಖಾನೆಯಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿದೆ. ಕಾರ್ಖಾನೆಯಲ್ಲಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡು ಕಾರ್ಖಾನೆ ಆವರಣವನ್ನು ವೇಗವಾಗಿ ವ್ಯಾಪಿಸಿದೆ. ಕಾರ್ಖಾನೆಯ ಆವರಣದಲ್ಲಿ ಹೆಂಚು ಸುಡಲು ಸಂಗ್ರಹಿಸಿಟ್ಟಿದ್ದ ಕಟ್ಟಿಗೆ ಮತ್ತು ಇತರ ದಹ್ಯ ವಸ್ತುಗಳಿದ್ದ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು. ಬೆಂಕಿ ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎನ್ನಲಾಗಿದೆ ಎಂದು ವರದಿಯಾಗಿದೆ. ಪಾಂಡೇಶ್ವರ ಮತ್ತು ಕದ್ರಿ ಅಗ್ನಿಶಾಮಕ ಠಾಣೆಗಳ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸಿದ್ದಾರೆ.
ಮಂಗಳೂರು,ಜ.19 : ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ಕದ್ರಿ ಉತ್ತರ ವಾರ್ಡಿನ ಈಡನ್ ಕ್ಲಬ್ ಬಳಿ ಸುಮಾರು 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ಮುಂದುವರಿದ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಅದರ ಭೂಮಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನಡೆಯಿತು. ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬೇಡಿಕೆಯಂತೆ ಈ ಕಾಮಗಾರಿಗೆ ಅನುದಾನವನ್ನು ಹೊಂದಿಸಿಕೊಳ್ಳಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಮುಗಿದು ಎಲ್ಲರ ಉಪಯೋಗಕ್ಕೆ ಬಳಕೆಯಾದರೆ ಖುಷಿಯ ವಿಚಾರವೆಂದರು. ಈ ಸಂದರ್ಭದಲ್ಲಿ ಸ್ಥಳೀಯ ನಿಕಟಪೂರ್ವ ಮ.ನ.ಪಾ ಸದಸ್ಯರಾದ ಶ್ರೀಮತಿ ಶಕೀಲಾ ಕಾವ, ಶಕ್ತಿಕೇಂದ್ರ ಅಧ್ಯಕ್ಷರಾದ ವೆಂಕಟೇಶ್, ಹರೀಶ್ ಕಾಮತ್, ರಮೇಶ್ ಮುಂಡಾಣ, ಮೋಹನ್ ಪೂಜಾರಿ, ನಿತಿನ್ ಕುಮಾರ್, ಪ್ರವೀಣ್ ನಿಡ್ಡೇಲ್, ಭಾಸ್ಕರಚಂದ್ರ ಶೆಟ್ಟಿ, ಪುರುಷೋತ್ತಮ್ ಶೆಣೈ, ಡಾ. ಸುಧೀಶ್ ರಾವ್, ಸಂತೋಷ್ ಕುಮಾರ್, ರಶ್ಮಿ ಪಿ, ಬಾಲಕೃಷ್ಣ ಶೆಟ್ಟಿ, ಲೋಕೇಶ್, ವರುಣ್ ಅಂಬಟ್, ಕಮಲಾಕ್ಷಿ ಗಂಗಾಧರ ಕದ್ರಿ, ಚೇತನ ನರೇಂದ್ರ, ರಾಮಚಂದ್ರ ದಂಡಕೇರಿ, ನರಸಿಂಹ ಗೌಡ, ಮೋಹನ, ಸವಿತಾ, ಕೆ.ಬಾಲಕೃಷ್ಣ ಶೆಟ್ಟಿ,…
ಮಂಗಳೂರು,ಜ.18 : ಮುಲ್ಕಿ ತಾಲೂಕಿನ ಸಸಿಹಿತ್ತು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಉಳ್ಳಾಯ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಸಮಾರಂಭ ಫೆಬ್ರವರಿ 4 ರಿಂದ 10 ರ ತನಕ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸಿ.ಬಿ ಕರ್ಕೆರ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು ಆ ಬಳಿಕ ಜೀರ್ಣೋದ್ಧಾರ ಆಗಿದೆ. ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ರಾತ್ರಿ ಬೆಳಗಾಗುವುದರೊಳಗೆ ಕೈಯಾರೆ ನಿರ್ಮಿಸಿದ ಈ ಕ್ಷೇತ್ರ, ಸಸಿಹಿತ್ತುವಿನ ಕಡಲತಡಿಯ ಸುಂದರ ಪ್ರದೇಶದಲ್ಲಿದ್ದು ಭಗವಂತ ಈಶ್ವರನು ಕಿರಾತ ರೂಪದಲ್ಲಿ ನೆಲೆ ನಿಂತನೆಂಬ ಇತಿಹಾಸ ಹೊಂದಿದ್ದು ಇತರ ಪರಿವಾರ ಶಕ್ತಿಗಳೊಂದಿಗೆ ಉಳ್ಳಾಯನಾಗಿ ಈ ಕ್ಷೇತ್ರದಲ್ಲಿ ಸೇವೆ ಪಡೆಯುತ್ತಿದ್ದು ಅದೆಷ್ಟೋ ಕಾಲದ ಜೀರ್ಣೋದ್ಧಾರದ ಕನಸು ಈಗ ನನಸಾಗಿದೆ ಎಂದರು. ಉಳ್ಳಾಯ, ಓಡ್ಯಂತಾಯ ಮತ್ತು ಪರಿವಾರ ಶಕ್ತಿಗಳಿಗೆ ಪ್ರಧಾನ ಆಲಯ ಹಾಗೆನೇ ಕಾಂತಾಬಾರೆ…
ಮಂಗಳೂರು, ಜ. 17 : ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಜಾಗತಿಕ ಬಿಲ್ಲವರ ಕ್ರೀಡೋತ್ಸವ 2026 ಜನವರಿ 18ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಮುದಾಯವನ್ನು ಸಂಘಟಿಸುವ ಉದ್ದೇಶದೊಂದಿಗೆ ಈ ಜಾಗತಿಕ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ 8 ಘಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ವಿಶ್ವಕಪ್ ಮಹಿಳಾ ಕಬ್ಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಆಟಗಾರ್ತಿ ಕು.ಧನಲಕ್ಷ್ಮೀ ಪೂಜಾರಿಯವರ ನೇತೃತ್ವದಲ್ಲಿ ಕ್ರೀಡಾಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ಆಟಗಾರರ ಜತೆಗೂಡುವಿಕೆಯಲ್ಲಿ ಕ್ರೀಡಾ ಜ್ಯೋತಿ ಮೆರವಣಿಗೆಯು ನಾರಾಯಣ ಗುರು ವೃತ್ತವಾಗಿ, ಲಾಲ್ ಭಾಗ್, ಕೆ.ಎಸ್.ರಾವ್ ಮಾರ್ಗವಾಗಿ ನೆಹರು ಮೈದಾನಕ್ಕೆ ತಲುಪಲಿದೆ. 9 ಘಂಟೆಗೆ ದಾಮೋದರ ಆರ್.ಸುವರ್ಣ ವೇದಿಕೆಯಲ್ಲಿ ಸಾಗರ್ ಗ್ರೂಪ್ ಆಫ್ ಹೊಟೇಲಿನ ಛೇರ್ ಮ್ಯಾನ್ ಜಯರಾಮ್ ಬನಾನ್ ಮತ್ತು ಮೈಸೂರಿನ ಪೂಜಾರಿ ಫಿಶ್ ಲ್ಯಾಂಡ್…
ಕಾರ್ಕಳ, ಜ. 16 : ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಸಹಿತ ಹಲವು ಸೊತ್ತುಗಳು ಹಾನಿಗೀಡಾಗಿರುವ ಘಟನೆ ಸಾಣೂರು ಗ್ರಾಮದ ಮುದ್ದಣ್ಣ ನಗರ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮುದ್ದಣ್ಣ ನಗರದ ವಾರಿಜಾ ಎಂಬುವವರ ಮನೆಯ ಅಡುಗೆ ಕೋಣೆಯ ಹೊರಭಾಗದ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು,ಸ್ಫೋಟದ ತೀವ್ರತೆಗೆ ಮನೆಯ ಗೋಡೆ, ಫರ್ನಿಚರ್ ವಿದ್ಯುತ್ ಉಪಕರಣಗಳು ಸೇರಿ ಹಲವು ಸೊತ್ತುಗಳು ಹಾನಿಗೊಳಗಾಗಿದೆ. ಘಟನೆಯಲ್ಲಿ ಮನೆ ಮಂದಿ ಪಾರಾಗಿದ್ದಾರೆ ಯಾರಿಗೂ ಗಾಯಗಳಾಗಿಲ್ಲ. ಸಿಲಿಂಡರ್ ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸುಮಾರು 3 ಲಕ್ಷ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.
ಮಂಗಳೂರು,ಜ.14 : ಮ.ನ.ಪಾ ವ್ಯಾಪ್ತಿಯ 32ನೇ ಕದ್ರಿ ಉತ್ತರ ವಾರ್ಡಿನ ನಂತೂರು ಕೊರಗಜ್ಜ ಗುಡಿಯ ಬಳಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ವೇದವ್ಯಾಸ್ ಕಾಮತ್ರವರು ಮಾತನಾಡಿ,, ಈ ಪ್ರದೇಶಕ್ಕೊಂದು ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆಂದು ಇಲ್ಲಿನ ನಿಕಟ ಪೂರ್ವ ಪಾಲಿಕೆ ಸದಸ್ಯೆ ಶಕೀಲಾ ಕಾವ ರವರು ಹಲವು ಬಾರಿ ನನ್ನಲ್ಲಿ ಮನವಿ ಮಾಡಿದ್ದರು. ಅದರಂತೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 25 ಲಕ್ಷ ಅನುದಾನವನ್ನು ಹೊಂದಿಸಿಕೊಂಡು ಶೀಘ್ರವಾಗಿ ಕಾಮಗಾರಿ ಮುಗಿಸಲಾಗಿತ್ತು. ಇದೀಗ ಅದರ ಉದ್ಘಾಟನೆಗೊಳ್ಳುತ್ತಿದ್ದು ಈ ಭಾಗದ ಎಲ್ಲರಿಗೂ ಉಪಯೋಗವಾಗಲೆಂದು ಹಾರೈಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಕಮಲಾಕ್ಷಿ, ಗಂಗಾಧರ ಕದ್ರಿ, ನೈನಾ ವಿಶ್ವನಾಥ್, ಚಂದ್ರಶೇಖರ ಬಜಾಲ್, ರವಿಚಂದ್ರ, ವೆಂಕಟೇಶ್, ದೃತೇಶ್ ಗುಂಡಳಿಕೆ, ವಿಜಯ ಶೆಣೈ, ರಮೇಶ್ ಮುಂಡಾಣ, ಚಂದ್ರಕಾಂತ್, ಶಿವಪ್ಪ ನಂತೂರು, ಸಂತೋಷ್ ನಂತೂರು, ಚೇತನ ನರೇಂದ್ರ, ಉಮಾ ಕಂಡೆಟ್ಟು, ಉಮಾ ಶೆಟ್ಟಿ,…
ಬಿಕರ್ಣಕಟ್ಟೆ,ಜ.14 : ಬಿಕರ್ಣಕಟ್ಟೆಯ ಬಾಲ ಯೇಸು ದೇವಾಲಯದಲ್ಲಿ ಜನವರಿ 14ರಂದು ವಾರ್ಷಿಕ ಹಬ್ಬವನ್ನು ಭಕ್ತಿಭಾವ ಮತ್ತು ಧಾರ್ಮಿಕ ಉತ್ಸಾಹದೊಂದಿಗೆ ಆಚರಿಸಲಾಯಿತು. ಹಬ್ಬದ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲು ಅನುಕೂಲವಾಗುವಂತೆ ಒಟ್ಟು ಐದು ಯುಕರಿಸ್ತಿಕ್ ಬಲಿದಾನಗಳನ್ನು ನೆರವೇರಿಸಲಾಯಿತು. ಬೆಳಗಿನ ಭವ್ಯ ಹಬ್ಬದ ಬಲಿದಾನವನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಎಲೋಷಿಯಸ್ ಪಾವ್ಲ್ ಡಿ’ಸೋಜಾ ಅವರು ನೆರವೇರಿಸಿದರು. ಸಂಜೆಯ ಭವ್ಯ ಹಬ್ಬದ ಬಲಿದಾನವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಅವರು ಅಧ್ಯಕ್ಷತೆ ವಹಿಸಿ ನೆರವೇರಿಸಿದರು. ತಮ್ಮ ಉಪನ್ಯಾಸದಲ್ಲಿ ಅವರು ಸ್ಪೇನ್ನ ಮಹಾನ್ ಕಾರ್ಮೆಲೈಟ್ ಧ್ಯಾನಗುರು ಸಂತ ಜಾನ್ ಆಫ್ ದ ಕ್ರಾಸ್ ತೋರಿಸಿದ ಆತ್ಮೀಯ ಮಾರ್ಗದಲ್ಲಿ ನಡೆಯುವಂತೆ ಭಕ್ತರನ್ನು ಆಹ್ವಾನಿಸಿದರು. ಈ ವರ್ಷ ಸಂತ ಜಾನ್ ಆಫ್ ದ ಕ್ರಾಸ್ ಅವರ ಸಂತಘೋಷಣೆಯ 300ನೇ ವಾರ್ಷಿಕೋತ್ಸವ ಹಾಗೂ ಅವರನ್ನು ಚರ್ಚ್ನ ಧರ್ಮಗುರು (ಡಾಕ್ಟರ್ ಆಫ್ ದ ಚರ್ಚ್) ಎಂದು ಘೋಷಿಸಿದ 100ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಅವರು…
ಮಂಗಳೂರು,ಜ.14 : ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ 32 ವರ್ಷಗಳನ್ನು ಪೂರ್ಣಗೊಳಿಸಿದೆ. ಸಂಭ್ರಮದ ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ ರವರು,ಮಂಗಳೂರಿನ ಬೆಳವಣಿಗೆಯಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಲು ನಮಗೆ ಅವಕಾಶ ದೊರೆತಿರುವುದು ಅಪಾರ ಹೆಮ್ಮೆಯ ವಿಷಯ. ಈ 32 ವರ್ಷದ ಪಯಣ ಅತ್ಯಂತ ತೃಪ್ತಿದಾಯಕವಾಗಿದೆ. ವರ್ಷಗಳ ಕಾಲ ನಮ್ಮೊಂದಿಗೆ ನಿಂತು ಬೆಂಬಲಿಸಿದ ಗ್ರಾಹಕರು, ಪಾಲುದಾರರು ಮತ್ತು ಸಿಬ್ಬಂದಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಸಂಸ್ಥೆಯ ನಿರ್ದೇಶಕ ಡಿಯಾನ್ ಮೊಂತೆರೊ ಅವರು ಮಾತನಾಡಿ, 32 ವರ್ಷಗಳನ್ನು ಪೂರೈಸಿರುವುದು ಕೇವಲ ಒಂದು ಸಂಸ್ಥೆಯ ಸಾಧನೆಯಷ್ಟೇ ಅಲ್ಲ, ಇದು ನಮ್ಮ ಗ್ರಾಹಕರು, ಪಾಲುದಾರರು ಹಾಗೂ ಸಿಬ್ಬಂದಿಯ ನಮ್ಮ ಮೇಲಿನ ವಿಶ್ವಾಸದ ಪ್ರತಿಬಿಂಬವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಣೆಗಾರಿಕೆ, ಗುಣಮಟ್ಟ ಮತ್ತು ಮೌಲ್ಯಗಳೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪ ನಮ್ಮದು ಎಂದು ತಿಳಿಸಿದರು. ಕಳೆದ ಮೂರು ದಶಕಗಳಲ್ಲಿ ರೋಹನ್ ಕಾರ್ಪೊರೇಷನ್ ಒಟ್ಟು 25 ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರಸ್ತುತ 12 ಯೋಜನೆಗಳು…
ಮಂಗಳೂರು,ಜ.13 : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವರ್ಷಾವಧಿ ಜಾತ್ರೆಯು ಜ.14 ರಿಂದ 24 ತನಕ ಜರಗಲಿರುವುದು. ವರ್ಷಾವಧಿ ಜಾತ್ರೆಯು ಜ.14 ಬುಧವಾರ ದಿಂದ ಆರಂಭವಾಗಲಿದೆ. ಮುಂಜಾನೆ ತೀರ್ಥ ಸ್ನಾನ ನಡೆಯಲಿದೆ. ಸಂಜೆ 6ಕ್ಕೆ ಧ್ವಜಸ್ತಂಭ ಆರೋಹಣ ಬಳಿಕ ಶ್ರೀ ಮಲರಾಯ ದೈವದ ಭಂಡಾರ ಆಗಮನ, ರಾತ್ರಿ ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣದ ಬಳಿಕ ಉತ್ಸವ ಬಲಿ,ದೀಪದ ಬಲಿ, ಸಣ್ಣ ರಥೋತ್ಸವ ಜರಗಲಿದೆ. ಪ್ರತಿನಿತ್ಯ ದೇವರ ಉತ್ಸವ ಬಲಿ ನಡೆಯಲಿದೆ. ಶುಕ್ರವಾರ ಬಿಕರ್ನಕಟ್ಟೆ ಸವಾರಿ, ಶನಿವಾರ ಮಲ್ಲಿಕಟ್ಟೆ ಸವಾರಿ, ಆದಿತ್ಯವಾರ ಮುಂಡಾಣಕಟ್ಟೆ ಸವಾರಿ, ಸೋಮವಾರ ಕೊಂಚಾಡಿ ಸವಾರಿ ನಡೆಯಲಿದೆ.ಜ20ರಂದು ಏಳನೇ ದೀಪೋತ್ಸವ ಹಾಗೂ ಅಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ಜ.21 ಸಂಜೆ 6ಕ್ಕೆ ಶ್ರೀ ಮನ್ಮಹಾರಥೋತ್ಸವ – ಬೆಳ್ಳಿ ರಥೋತ್ಸವ , ಜ.22 ಬೆಳಗ್ಗೆ ಮಂಜುನಾಥ ದೇವರ ಕವಾಟೋದ್ಘಾಟನೆ, ರಾತ್ರಿ ಚಂದ್ರಮಂಡಲ ಉತ್ಸವ, ಅವಭೃತ ಸ್ನಾನ ಹಾಗೂ ಧ್ವಜಾವರೋಹಣ. ಜ.24 ರಾತ್ರಿ ಶ್ರೀ ಮಲರಾಯ, ಶ್ರೀ ಜಾರಂದಾಯ,…
ಬಿಕರ್ನಕಟ್ಟೆ, ಜ. 12 : ಬಾಲ ಯೇಸುವಿನ ವಾರ್ಷಿಕ ಮಹೋತ್ಸವದ ಸಿದ್ಧತೆಯ ನೋವೆನಾದ ಮೂರನೇ ದಿನದಂದು, ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ದಿನವನ್ನು ಭಕ್ತಿ ಮತ್ತು ಆಧ್ಯಾತ್ಮಿಕ ಉತ್ಸಾಹದೊಂದಿಗೆ ಆಚರಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಪ್ರಾರ್ಥನೆ ಮತ್ತು ಚಿಂತನೆಯಲ್ಲಿ ಪಾಲ್ಗೊಂಡಿದ್ದರು. “ನಿನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಅನುಸರಿಸು” ಎಂಬುದು ಈ ದಿನದ ಶೀರ್ಷಿಕೆಯಾಗಿದ್ದು, ಭಕ್ತಾದಿಗಳು ಕ್ರಿಸ್ತನನ್ನು ಅನುಸರಿಸುವಲ್ಲಿ ಎದುರಾಗುವ ಸವಾಲುಗಳು ಮತ್ತು ಅಡೆತಡೆಗಳನ್ನು ನಂಬಿಕೆ ಹಾಗೂ ತಾಳ್ಮೆಯಿಂದ ಸ್ವೀಕರಿಸುವ ಸತ್ಯ ಶಿಷ್ಯತ್ವದ ಬಗ್ಗೆ ಪ್ರತಿಬಿಂಬಿಸಲು ಆಹ್ವಾನ ನೀಡಲಾಯಿತು. ಆರೋಗ್ಯಕರ ಪರಿಸರ ಮತ್ತು ಪ್ರಕೃತಿಯ ಸೌಂದರ್ಯವೆಂಬ ದೇವರ ಕೊಡುಗೆಗಾಗಿ ಕೃತಜ್ಞತಾ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು, ಜೊತೆಗೆ ಅದರ ರಕ್ಷಣೆ ಮತ್ತು ಸಂರಕ್ಷಣೆಗಾಗಿ ವಿಶೇಷ ಬಿನ್ನಹಗಳನ್ನು ಅರ್ಪಿಸಲಾಯಿತು. ದಿನದ ಕಾರ್ಯಕ್ರಮಗಳು ಬೆಳಿಗ್ಗೆ 6:00 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಪತ್ರಿಕೆ ‘ಉಜ್ವಾಡ್’ನ ಸಂಪಾದಕರಾದ ವಂ| ಆಲ್ವಿನ್ ಸಿಕ್ವೇರಾ, ಒಸಿಡಿ ಇವರಿಂದ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಬೆಳಿಗ್ಗೆ 7:30ರ ಪ್ರಾರ್ಥನಾ…












