Subscribe to Updates
Get the latest creative news from FooBar about art, design and business.
Author: admin
ಮಂಗಳೂರು, ಏ.11 : ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ ‘ಮೀರಾ’ ತುಳು ಚಲನಚಿತ್ರ ಮಂಗಳೂರಿನ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು. ಈ ಚಿತ್ರಕ್ಕೆ ಅಶ್ವಥ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಮಾಜಿ ಮೇಯರ್ ಮನೋಜ್ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಬಿಡುಗಡೆ ಗೊಳಿಸಿದರು. ತುಳುವಿನಲ್ಲಿ ಬಿಡುಗಡೆ ಗೊಂಡಿರುವ ಮೀರಾ ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಮೀರಾ ತುಳು ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ಹೇಳಿದರು. ನಟ, ನಿರ್ದೇಶಕ ರಾಹುಲ್ ಮಾತನಾಡಿ ನಗರದಲ್ಲೀಗ ಫ್ಲೆಕ್ಸ್ ಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ನಿಷೇಧ ಏರಿರುವುದರಿಂದು ತುಳು ಸಿನಿಮಾರಂಗದ ಮೇಲೆ ನೇರ ಪರಿಣಾಮ ಬೀರಿದೆ. ಹೀಗಾಗಿ ತುಳುಸಿನಿಮಾ ರಂಗದ ನಿರ್ಮಾಪಕರು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ ಎಂದರು. ನಿರ್ಮಾಪಕ ಲಂಚುಲಾಲ್ ಕೆ…
ಮಂಗಳೂರು, ಏ.11 : ಕುಲಾಲ ಪ್ರತಿಷ್ಠಾನ ಮಂಗಳೂರು ವತಿಯಿಂದ ‘ಕುಲಾಲ ಪರ್ಬ’ ಕಾರ್ಯಕ್ರಮ ಏ.13 ರಂದು ಮಧ್ಯಾಹ್ನ 2 ಗಂಟೆಯಿಂದ ಉರ್ವಸ್ಟೋರ್ ಬಳಿಯ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಆಡಳಿತ ಟ್ರಸ್ಟಿ ಬಿ. ಸುರೇಶ್ ಕುಲಾಲ್ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 2 ಗಂಟೆಗೆ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಆತಿಥಿಗಳಾಗಿ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಪ್ರಧಾನ ಅರ್ಚಕ ಶಿವಾನಂದ ಕನ್ನಡ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಮಾಜಿ ಅಧ್ಯಕ್ಷ ಎಂ.ಪಿ. ಬಂಗೇರ, ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್, ಓಲ್ಡ್ ಕೆಂಟ್ ರಸ್ತೆ ಶ್ರೀ ದೇವಿ ದೇವಸ್ಥಾನ ಅಧ್ಯಕ್ಷ ಸದಾಶಿವ ಕುಲಾಲ್ ಅತ್ತಾವರ, ನ್ಯಾಯವಾದಿ ರಾಮ್ ಪ್ರಸಾದ್ ಎಸ್., ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯಾಧ್ಯಕ್ಷ ಗ೦ಗಾಧರ…
ಮಂಗಳೂರು,ಏ.11: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊ ರೇಷನ್ ಲಿ.(ಐಆರ್ಸಿಟಿಸಿ) ಮಂಗಳೂರು ಹಾಗೂ ಸುತ್ತಮುತ್ತಲಿನ ಮತ್ತು ಪ್ರದೇಶಗಳ ಪ್ರವಾಸಿಗರು ಯಾತ್ರಾರ್ಥಿಗಳ ಅನುಕೂಲಕ್ಕಾಗಿ, ಐಆರ್ ಸಿಟಿಸಿ ಮಂಗಳೂರಿನಿಂದ ಹೊರಡುವ ಹೊಸ ರೈಲು ಮತ್ತು ವಿಮಾನ ಪ್ರಯಾಣ ಪ್ಯಾಕೇಜ್ಗಳನ್ನು ಪರಿಚಯಿಸಿದೆ ಎಂದು ಪ್ರವಾಸೋದ್ಯಮ ಜಂಟಿ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಪಿ. ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಆರ್ ಸಿಟಿಸಿ ಅಯೋಧ್ಯೆ ದರ್ಶನದೊಂದಿಗೆ ವಾರಣಾಸಿ ಎಂಬ ವಿಶೇಷ ವಿಮಾನ ಪ್ಯಾಕೇಜ್ ನೀಡಲಿದೆ. ಈ ಪ್ರವಾಸವು ಮಂಗಳೂರು ವಿಮಾನ ನಿಲ್ದಾಣದಿಂದ ಮೇ 6ರಂದು ಹೊರಡಲಿದೆ. ಮಂಗಳೂರಿನಿಂದ ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ಏರ್ ಟೂ ರ್ ಪ್ಯಾಕೇಜ್ ಬೆಲೆ ಪ್ರತಿ ವ್ಯಕ್ತಿಗೆ 36,700 ರೂ. ಆಗಲಿದೆ. ವಿಶೇಷ 6 ದಿನಗಳ ವಿಮಾನ ಪ್ರಯಾಣ ಪ್ಯಾಕೇಜ್ ಗಳೊಂದಿಗೆ ಮಂಗಳೂರಿನಿಂದ ಕಾಶ್ಮೀರ ಏರ್ ಟೂ ರ್ ಪ್ಯಾಕೇಜ್ ಇದ್ದು, ಮಂಗಳೂ ರಿನಿಂದ ಆ.25ರಂದು ಹೊರಡಲಿದೆ. ಬೆಲೆಯು ಪ್ರತಿ ವ್ಯಕ್ತಿಗೆ 51,700 ರೂ.ನಿಂದ ಪ್ರಾರಂಭವಾಗುತ್ತವೆ…
ಸುರತ್ಕಲ್ : ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನದಲ್ಲಿ ಎ.18 ರಿಂದ 26ರ ವರೆಗೆ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕ, ಜಾತ್ರಾಮಹೋತ್ಸವ, ನೂತನ ಬ್ರಹ್ಮರಥ ಸಮರ್ಪಣೆ ಬ್ರಹ್ಮರಥೋತ್ಸವ, ಭಜನಾ ಸಂಭ್ರಮೋತ್ಸವ, ನಾಗಮಂಡಲೋತ್ಸವ, ಜಾರಂದಾಯ ದೈವದ ನೇಮೋತ್ಸವವು ಜರುಗಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಗುರುವಾರ ದೇವಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಎ.18ರಂದು ಹಸಿರು ಹೊರೆಕಾಣಿಕೆ ವಾಹನ ಜಾಥಾ ಮೆರವಣಿಗೆ ನಡೆಯಲಿದೆ. ಇಡ್ಯಾ ಶ್ರೀ ಮಹಾಲಿಂಗೇಶ್ವ ದೇವಸ್ಥಾನದ ವಠಾರದಿಂದ ಸಂಜೆ 3:30ಕ್ಕೆ ಆರಂಭಗೊಳ್ಳಲಿರುವ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಳದ ಅನುವಂಶಿಕ ಮೊತ್ತೇಸರರಾದ ವೇ.ಮೂ. ಐ. ರಮಾನಂದ ಅವರು ಚಾಲನೆ ನೀಡಲಿದ್ದಾರೆ. ಇಡ್ಯಾದಿಂದ ಚೊಕ್ಕಬೆಟ್ಟು ಮಾರ್ಗವಾಗಿ ಕೃಷ್ಣಾಪುರ 5ನೇ ಬ್ಲಾಕ್ ಯುವಕ ಮಂಡಳಕ್ಕೆ ತಲುಪಿ ಬಳಿಕ 4:30ಕ್ಕೆ ಅಲ್ಲಿಂದ ಭವ್ಯ ಶೋಭಾಯಾತ್ರೆಯ ಮೂಲಕ ಹೊರೆಕಾಣಿಕೆ ಶ್ರೀ ಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನಕ್ಕೆ ತಲುಪಲಿದೆ ಎಂದರು.…
ಮಂಗಳೂರು, ಏ.9 : ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣಗೊಂಡಿರುವ ‘ಮೀರಾ’ ತುಳು ಚಲನಚಿತ್ರ ಏ.11ರಂದು ಬಿಡುಗಡೆಯಾಗಲಿದೆ. ‘ಮೀರಾ’ ತುಳು ಸಿನೆಮಾಕ್ಕೆ ಅಶ್ವತ್ಥ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಮೀರಾ ಚಿತ್ರವು ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಚಿತ್ರದಲ್ಲಿ ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ. ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಅಶ್ವತ್ವ, ಬೇಬಿ ಲಕ್ಷ್ಯ, ಎಲ್. ಮೊದಲಾದ ಕಲಾವಿದರ ಜತೆ ಮುಂಬೈ ಮೂಲದ ತುಳು ಬ್ಲಾಗ್ ನಟಿ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದ ಅನೇಕ ಪ್ರತಿಭೆಗಳೂ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎಂದು ಚಿತ್ರದ ನಿರ್ಮಾಪಕ ಲಂಚುಲಾಲ್ ಕೆ.ಎಸ್. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಚಿತ್ರದಲ್ಲಿ 5 ಹಾಡುಗಳಿದ್ದು, ಹಿನ್ನೆಲೆ ಗಾಯಕರಾದ ಮಧುಬಾಲಕೃಷ್ಣನ್ ಸೇರಿದಂತೆ ಹೆಸರಾಂತ ಗಾಯಕರ ಧ್ವನಿಯಲ್ಲಿ ಮೂಡಿ ಬಂದಿದೆ.…
ಮಂಗಳೂರು, ಏ.9 : ಮಾರ್ಚ್ 28 ರಿಂದ 30 ರವರೆಗೆ ತಮಿಳುನಾಡಿನ ಕರ್ಷಗ ವಿನಾಯಕ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ನಡೆದ ಎಸ್.ಎ.ಇ.ಐ.ಎಸ್.ಎಸ್ ಡೋನ್ ಡೆವಲಪ್ಮೆಂಟ್ ಚಾಲೆಂಜ್ 2025 ಸ್ಪರ್ಧೆಯ ಮೈಕ್ರೋ ಏರ್ ಕ್ರಾಫ್ಟ್ ವಿಭಾಗದಲ್ಲಿ ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ.ರಿಯೋ ಡಿಸೋಜ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಏರೋ ಮಾಡೆಲಿಂಗ್ ಕ್ಲಬ್ – ಎಸ್ ಜೆಇಸಿ ಏರೋ ಮಾನವರಹಿತ ವೈಮಾನಿಕ ವ್ಯವಸ್ಥೆಗಳಲ್ಲಿ ನಾವೀನ್ಯತೆಗೆ ಒತ್ತು ನೀಡುತ್ತಿದೆ. ಶಾಲೆಗಳಿಗೆ ಭೇಟಿ ನೀಡಿ ಕಾರ್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಏರೋ ಮಾಡಲಿಂಗ್ನಲ್ಲಿ ಆಸಕ್ತಿಯನ್ನು ಮೂಡಿಸುತ್ತಿದೆ ಎಂದರು. ತಂಡದ ನಾಯಕ-ಅಕ್ಷಯ್ ಬಂಗೇರ, ಪೈಲಟ್ – ಮನಿಶ್’ ಎಂ.ಕೆ., ಸೈದ್ಧಾಂತಿಕ ತಂಡ- ಜೀವಿತ್ ಜಿ., ಆದಿತ್ಯ ಆರ್., ಗುರುಮಾಧವ ಎಚ್., ರಾಹುಲ್ ಟಿ.ಪಿ., ವಿನ್ಯಾಸ ತಂಡ- ಜೀವಿತ್ ಜಿ., ಮನ್ನಿಶ್ ಎಂ.ಕೆ., ಅಕ್ಷಯ್ ಬಂಗೇರ, ಲೇಖ್ನಾ ಶೆಟ್ಟಿ,…
ಮಧೂರು, ಎ.8: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದ ಮೂಡಪ್ಪ ಸೇವೆ ತಂತ್ರಿವರ್ಯ ಬ್ರಹಶ್ರೀ ಉಳಿಯತ್ತಾಯ ವಿಷ್ಣು ಆಸೆ ಅವರ ನೇತೃತ್ವದಲ್ಲಿ ಆದಿತ್ಯವಾರ ಬೆಳಿಗ್ಗೆ ಸಂಪನ್ನಗೊಂಡಿತು. ಮೂಡಪ್ಪ ಸೇವೆ ಅಂಗವಾಗಿ ಶನಿವಾರ ರಾತ್ರಿ ಶಯ್ಯಾಕಲ್ಪನೆ, ಕವಾಟ ಬಂಧನದ ಬಳಿಕ ಮುಚ್ಚಲ್ಪಟ್ಟ ಶ್ರೀ ದೇವರ ಗರ್ಭಗೃಹದ ಕವಾಟೋದ್ಘಾಟನೆ ಬೆಳಗ್ಗೆ ನಡೆದು ಗರ್ಭಗೃಹ ಬಾಗಿಲು ತೆರೆಯಲಾಯಿತು. ಈ ವೇಳೆ ಅಪೂಪ ಪರ್ವತದ (ಅಪ್ಪಕಜ್ಜಾಯ) ಮಧ್ಯದಿಂದ ಮೂಡಿಬರುವ ಬೊಡ್ಡಜ್ಜ ಶ್ರೀ ಮಧೂರು ಸಿದ್ಧಿವಿನಾಯಕ ದೇವರ ದಿವ್ಯ ದರ್ಶನದೊಂದಿಗೆ ವಿಶೇಷಾಭಿಷೇಕ, ಪ್ರಸನ್ನ, ಪೂಜೆ, ಅಪೂಪ(ಅಪ್ಪ)ಪ್ರಸಾದ ಮುಸ್ಸಂಜೆಯ ವರೆಗೂ ವಿತರಣೆ ನಡೆಯಿತು. ಬಳಿಕ 128 ಕಾಯಿ, ಅಷ್ಟದ್ರವ್ಯ ಮಹಾಗಣಪತಿಯಾಗ, ಮಹಾಪೂಜೆ ನಡೆಯಿತು. ಸಂಜೆ ಜಳಕದ ಬಲಿ, ಕಟ್ಟೆಪೂಜೆ, ಶ್ರೀ ದೇವರ ಕೆರೆಯಲ್ಲಿ ಅವಭೃತ ಸ್ನಾನ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು. ಮೂಡಪ್ಪ ಸೇವೆ ವೀಕ್ಷಿಸಲು ರವಿವಾರ ಮುಂಜಾನೆ 1 ರ ವೇಳೆಗೆ ಜನರು ಆಗಮಿಸತೊಡಗಿದ್ದರು.ನೀರ್ಚಾಲ್ ಮಧೂರು ರಸ್ತೆಯ ಏರಿಕ್ಕಳ, ಕೊಲ್ಯಗಳಿಂದ ಸುಮಾರು 3 ಕಿ.ಮೀ. ದೂರದಿಂದ ಕಾಸರಗೋಡು…
ವಿಟ್ಲ, ಏ.07 : ಶಾರದಾ ಆರ್ಟ್ಸ್ ಮಂಜೇಶ್ವರ ಇದರ ಕಲಾವಿದ ಸುರೇಶ್ ವಿಟ್ಲ ಇಂದು ನಿಧನ ಹೊಂದಿದರು. ಸುರೇಶ್ ವಿಟ್ಲ ಅವರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ತುಳು ನಾಟಕ ಕಲಾವಿದ ಸುರೇಶ್ ವಿಟ್ಲ ಅವರು ಖಳನಾಯಕ, ಸ್ತ್ರೀ ವೇಷ, ಹಾಸ್ಯ ನಾಟಕಗಳಲ್ಲಿ ವಿವಿಧ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಬೋಳೂರು, ಏ.06: ಬಾಲಾಂಜನೇಯ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವ, ಅಮೃತ ಮಹೋತ್ಸವ ಪ್ರಯುಕ್ತ ಶುಕ್ರವಾರ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ವೈದಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬೆಳಗ್ಗೆ ಗಣಪತಿ ಹೋಮ ಸಂಪನ್ನ ಗೊಂಡಿತು. ಬಳಿಕ ತೋರಣ ಮುಹೂರ್ತ, ಪ್ರಾಯಶ್ಚಿತ್ತ ಹೋಮಗಳು, ನವಗಹ ಶಾಂತಿ ಹೋಮ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ರಾಮಭದ್ರಕ ಮಂಡಲ ಪೂಜೆ ನಡೆಯಿತು. ಎ. 5ರಂದು ಬೆಳಗ್ಗೆ ಶಾಂತಿ ಹೋಮಗಳು, ಬಿಂಬ ಶುದ್ದಿ ಪ್ರಕ್ರಿಯೆಗಳು ವಾಯುಸ್ತುತಿ ಪುರಶ್ಚರಣ ಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಬಿಂಬಾಧಿವಾಸ ಪ್ರಕ್ರಿಯೆಗಳು, ಅಧಿವಾಸ ಹೋಮ , ತತ್ವಹೋಮ, ಅಷ್ಟೋತ್ತರ ಗಳ ಶತಕಲಶಪೂರಣ, ಕಲಶಾಧಿವಾಸ ಕಾರ್ಯಕ್ರಮ ನಡೆಯಿತು. ಸಂಜೆ ಸಾಮೂಹಿಕ ಹನುಮಾನ್ ಚಾಲೀಸ ಪಠನ, ಭಕ್ತಿ ಭಾವ ಸಂಗಮ – ವೀಡಿಯೋ ಗೀತೆ ಗಳ ಸಂಭ್ರಮ, ಸನಾತನ ನಾಟ್ಯಾಲಯದಿಂದ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು.
ಮಂಗಳೂರು ಏ.06 : ಜಪ್ಪು ಬಪ್ಪಾ ಲ್ ಶೀ ಜನಾರ್ದನ ಭಜನಾ ಮಂದಿರದ ಅಮೃತ ಮಹೋತ್ಸವದ ಕಾರ್ಯಕ್ರಮಗಳ ಅಂಗವಾಗಿ ಅಖಂಡ ಭಜನ ಸಪ್ತಾಹಕ್ಕೆ ಏ.05, ಶನಿವಾರ ಸೂರ್ಯೋದಯ ವೇಳೆ ನಂದಾದೀಪವನ್ನು ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಾಯಿತು. ಶೀ ಜನಾರ್ದನ ಭಜನಾ ಮಂದಿರದ ಮಂದಿರದ ಅಧ್ಯಕ್ಷ ಜೆ. ನವೀನ್ ಶೆಟ್ಟಿ ಮತ್ತು ವಿನಯಾ ಎನ್. ಶೆಟ್ಟಿ ದಂಪತಿ ಜ್ಯೋತಿ ಬೆಳಗಿಸಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಜೆ. ರಘುವೀರ್, ಅಮೃತ ಮಹೋತ್ಸವದ ಸಮಿತಿ ಸಂಚಾಲಕ ಜೆ.ಪುಂಡಲೀಕ ಸುವರ್ಣ, ಉಪಾಧ್ಯಕ್ಷ ಸತೀಶ್ ಆಚಾರ್, ಲಕ್ಷ್ಮಣ್ ಆಚಾರ್, ರಘುವೀರ್ ಆಚಾರ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್,ಕೋಶಾಧಿಕಾರಿ ಉಮೇಶ್ ಕೆ., ವಸಂತ ಶೆಟ್ಟಿ, ಅಶ್ವತ್ ಶೆಟ್ಟಿ, ಜೆ. ನವೀನ್ ಕುಮಾರ್, ಪುಷ್ಪರಾಜ್ ಶೆಟ್ಟಿ, ವಿ.ಕೆ.ರಾಜನ್, ಕಿಶೋರ್ ಕೋಟ್ಯಾನ್, ಅರವಿಂದ ರಾವ್, ಜಯಶ್ರೀ ಸುನಿಲ್, ಸರಿತಾ, ಅರ್ಚಕ ಬಿ. ಬಾಲಕೃಷ್ಣ ಉಪಸ್ಥಿತರಿದ್ದರು.