ಮಂಗಳೂರು, ಸೆ. 29 : ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಲಂಚುಲಾಲ್ ಕೆ.ಎಸ್. ನಿರ್ಮಾಣದ ‘ನೆತ್ತರಕೆರೆ’ ತುಳು ಚಿತ್ರವನ್ನು ಹಿರಿಯ ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ಬೈಲ್ ಅವರು ಶುಕ್ರವಾರ ನಗರದ ಬಿಗ್ ಸಿನಿಮಾಸ್ನಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ವಿಭಿನ್ನ ಪರಿಕಲ್ಪನೆಯ ಚಿತ್ರಗಳು ಈಗ ತುಳು ಭಾಷೆಯಲ್ಲಿ ಬರುತ್ತಿದೆ. ತುಳುವಿನ 150ನೇ ಚಿತ್ರವಾದ ನಿರ್ದೇಶಕ ಸ್ವರಾಜ್ ಶೆಟ್ಟಿ ಅವರ ‘ನೆತ್ತರೆಕೆರೆ’ ತುಳು ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲಿ ಎಂದರು.
ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, ಇದುವರೆಗೆ ತುಳುವಲ್ಲಿ ಕಾಮಿಡಿ ಚಿತ್ರಗಳು ಬರುತ್ತಿದ್ದವು. ಇದೀಗ ವಿಭಿನ್ನ ಚಿತ್ರಗಳು ಬರಲಾರಂಭಿಸಿದೆ. ‘ನೆತ್ತರಕೆರೆ’ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ನಿರ್ದೇಶಕ ಸ್ವರಾಜ್ ಶೆಟ್ಟಿ ಮಾತಾಡಿ, ತುಳುವಲ್ಲಿ ಬದಲಾವಣೆ ಇರಬೇಕು ಎಂದು ನೆತ್ತೆರೆಕೆರೆ ಸಿನಿಮಾ ಮಾಡಲಾಗಿದೆ. ಚಿತ್ರ ವನ್ನು ತುಳುನಾಡಿನ ಸಮಸ್ತ ಜನರು ಚಿತ್ರವನ್ನು ನೋಡಿ ಬೆಂಬಲಿಸಿ ಎಂದರು.
ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ನಟ ಪೃಥ್ವಿ ಅಂಬಾರ್, ಇಸ್ಮಾಯಿಲ್ ಮೂಡುಶೆಡ್ಡೆ, ಲಕ್ಷ್ಮಣ್ ಕುಂದರ್, ಸಂತೋಷ್ ಶೆಟ್ಟಿ, ಎ.ಕೆ.ವಿಜಯ ಕೋಕಿಲ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಶೋಧನ್ ಶೆಟ್ಟಿ, ಶಶಿರಾಜ್ ಕಾವೂರು, ದಿಶಾಲಿ ಪೂಜಾರಿ, ನಮಿತಾ ಕೂಳೂರು, ಕಿರಿಕ್ ಕೀರ್ತಿ , ತ್ರಿಶೂಲ್ ಶೆಟ್ಟಿ, ಉದಯ್ ಬಳ್ಳಾಲ್ , ವಿನೋದ್ರಾಜ್ ಕೋಕಿಲ, ಸಚಿನ್ ಎ.ಎಸ್.ಉಪ್ಪಿನಂಗಡಿ, ಉಪಸ್ಥಿತರಿದ್ದರು.
ಯತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.ನೆತ್ತೆರೆಕೆರೆ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ಕಲ್ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಅಲಂಕಾರ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದೆ.











