ಮಂಗಳೂರು, ಜೂ.22 : ನವ ಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ವತಿಯಿಂದ 12ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಅಧಿಕಾರಿಗಳು, ನೌಕರರು, ಸಿಐಎಸ್ಎಫ್ ಸಿಬ್ಬಂದಿ, ಕುಟುಂಬ ಸದಸ್ಯರು, ಬಂದರು ಬಳಕೆದಾರರು ಹಾಗೂ ವಿವಿಧ ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಎನ್ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎನ್ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಅವರು ಮಾತಾಡಿ, ದೈಹಿಕಆರೋಗ್ಯ, ಮಾನಸಿಕ ಸ್ಟೈರ್ಯ ಕಾಯ್ದುಕೊಳ್ಳಲು ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.ಯೋಗ ದಿನಾಚರಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಎನ್ಎಂಪಿಎ ಕುಟುಂಬವನ್ನು ಅವರು ಅಭಿನಂದಿಸಿದರು.
ಯೋಗ ಶಿಕ್ಷಕ ಕಿಶೋರ್ ಸುವರ್ಣ ಅವರ ಪರಿಣಿತ ಮಾರ್ಗದರ್ಶನದಲ್ಲಿ ಭಾಗವಹಿಸಿದವರು ವಿವಿಧ ಯೋಗಾಸನಗಳು, ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಎನ್ಎಂಪಿಎ ಕಾರ್ಯದರ್ಶಿ ಜಿಜೋ ಥಾಮಸ್, ಹಣಕಾಸು ಸಲಹೆಗಾರ ಮತ್ತು ಮುಖ್ಯ ಲೇಖಪಾಲಕ ವೀರರಾಘವನ್, ಟ್ರಾಫಿಕ್ ಮ್ಯಾನೇಜರ್ ಕೆ. ರಾಜೇಂದ್ರ ಕುಮಾರ್, ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ದೀಪಕ್ ರಾಥ್, ಮುಖ್ಯ ವೈದ್ಯಾಧಿಕಾರಿ ಸುಲೇಖಾ ಹೊಸಕೇರಿ, ಸಿಐಎಸ್ಎಫ್ ಉಪ ಕಮಾಂಡೆಂಟ್ ರಾಜೇಂದ್ರ ಪಿ. ಪಾಠಕ್, ಯೋಗ ಶಿಕ್ಷಕ ಕಿಶೋರ್ ಸುವರ್ಣ, ಎನ್ಎಂಪಿಎ ಮಂಡಳಿ ಸದಸ್ಯ ಜಗದೀಶ್ ಸಾನಿಲ್, ಅಧೀಕ್ಷಕ ಇಂಜಿನಿಯರ್ (ಸಿವಿಲ್) ಯೋಗೇಂದ್ರ ಮತ್ತು ಹಿರಿಯ ಉಪ ಕಾರ್ಯದರ್ಶಿ ವಿಶಾಲಾಕ್ಷಿ ಉಪಸ್ಥಿತರಿದ್ದರು.











