ದಕ್ಷಿಣ ಕನ್ನಡ, ಜೂ.03 : ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಮತ್ತು ಅಬ್ದುಲ್ ರಹಿಮಾನ್ ಕೊಲೆಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಜನರನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದ್ದು, ಅವರಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಕೂಡ ಸೇರಿದ್ದಾರೆ. ಈ ಕ್ರಮವು ಕೋಮು ಸೌಹಾರ್ದತೆಯನ್ನು ಕಾಪಾಡುವ ಗುರಿಯನ್ನು ಹೊಂದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಸುಹಾಸ್ ಶೆಟ್ಟಿ ಹಾಗೂ ಅಬ್ದುಲ್ ರಹಿಮಾನ್ ಕೊಲೆ ಬಳಿಕ ಕೋಮು ದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಇದರ ಹಿಂದಿರುವ ಮತೀಯ ಸಂಘಟನೆಗಳ ಕೋಮು ದ್ವೇಷ ತಡೆಗಟ್ಟುವ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ಪ್ರಯತ್ನದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ ಎನ್ನದೆ ಕೋಮು ಪ್ರಚೋದಕ ಕೃತ್ಯದಲ್ಲಿ ತೊಡಗಿರುವವರನ್ನು ಜಿಲ್ಲೆಯಿಂದಲೇ ಹೊರಗಟ್ಟಲು ಪೊಲೀಸರು ಹೊರಟಿದ್ದಾರೆ.
ಹಸೈನಾರ್- ಬಂಟ್ವಾಳ ನಗರ ಠಾಣೆ, ಪವನ್ ಕುಮಾರ್ -ಬಂಟ್ವಾಳ ಗ್ರಾಮಾಂತರ ಠಾಣೆ, ಚರಣ್ ರಾಜ್- ಬಂಟ್ವಾಳ ಗ್ರಾಮಾಂತರ, ಗಣೇಶ ಪೂಜಾರಿ- ವಿಟ್ಲ ಪೊಲೀಸ್ ಠಾಣೆ, ಅಬ್ದುಲ್ ಖಾದರ್- ವಿಟ್ಲ ಪೊಲೀಸ್ ಠಾಣೆ, ಚಂದ್ರಹಾಸ- ವಿಟ್ಲ ಪೊಲೀಸ್ ಠಾಣೆ, ಮಹಮ್ಮದ್ ಅಶ್ರಫ್- ಬಂಟ್ವಾಳ ಗ್ರಾಮಾಂತರ, ಅಬ್ದುಲ್ ಲತೀಫ್- ಬಂಟ್ವಾಳ ಗ್ರಾಮಾಂತರ, ಮೊಯ್ದಿನ್ ಅದ್ನಾನ್ – ಬಂಟ್ವಾಳ ಗ್ರಾಮಾಂತರ, ಭರತ್ ಕುಮ್ಡೇಲ್-ಬಂಟ್ವಾಳ ಗ್ರಾಮಾಂತರ, ಮಹಮ್ಮದ್ ಸಫ್ವಾನ್-ಬಂಟ್ವಾಳ ನಗರ, ಭುವಿತ್ ಶೆಟ್ಟಿ- ಬಂಟ್ವಾಳ ನಗರ, ರಾಜೇಶ್- ಬಂಟ್ವಾಳ ನಗರ, ಅಶ್ರಫ್ ಬಿ- ಪೂಂಜಾಲಕಟ್ಟೆ ಠಾಣೆ, ಮನೋಜ್ ಕುಮಾರ್- ಬೆಳ್ತಂಗಡಿ ಠಾಣೆ, ಮಹೇಶ ಶೆಟ್ಟಿ ತಿಮರೋಡಿ- ಬೆಳ್ತಂಗಡಿ ಠಾಣೆ, ಹಕೀಂ ಕೂರ್ನಡ್ಕ- ಪುತ್ತೂರು ನಗರ, ಅಜಿತ್ ರೈ- ಪುತ್ತೂರು ನಗರ ಇವರನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿ ದೆ
ಜೊತೆಗೆ ಅರುಣ್ ಕುಮಾರ್ ಪುತ್ತಿಲ- ಪುತ್ತೂರು ನಗರ, ಮನೀಶ್ ಎಸ್- ಪುತ್ತೂರು ನಗರ, ಅಬ್ದುಲ್ ರಹಿಮಾನ್- ಪುತ್ತೂರು ನಗರ, ಕೆ. ಅಝೀಜ್- ಪುತ್ತೂರು ನಗರ, ರಾಕೇಶ್ ಕೆ- ಪುತ್ತೂರು ಗ್ರಾಮಾಂತರ, ಕಿಶೋರ್- ಪುತ್ತೂರು ಗ್ರಾಮಾಂತರ, ನಿಶಾಂತ್ ಕುಮಾರ್- ಪುತ್ತೂರು ಗ್ರಾಮಾಂತರ, ಮಹಮ್ಮದ್ ನವಾಝ್- ಕಡಬ ಠಾಣೆ, ಸಂತೋಷ್ ಕುಮಾರ್ ರೈ- ಉಪ್ಪಿನಂಗಡಿ ಠಾಣೆ, ಜಯರಾಮ- ಉಪ್ಪಿನಂಗಡಿ ಠಾಣೆ, ಸಂಶುದ್ದೀನ್- ಉಪ್ಪಿನಂಗಡಿ ಠಾಣೆ, ಮಹಮ್ಮದ್ ಶಾಕಿರ್- ಉಪ್ಪಿನಂಗಡಿ ಠಾಣೆ, ಸಂದೀಪ್- ಉಪ್ಪಿನಂಗಡಿ ಠಾಣೆ, ಅಬ್ದುಲ್ ಅಝೀಝ್ -ಉಪ್ಪಿನಂಗಡಿ ಠಾಣೆ, ಲತೇಶ್ ಗುಂಡ್ಯ- ಸುಳ್ಯ ಠಾಣೆ, ಮನೋಹರ- ಸುಳ್ಯ ಠಾಣೆ, ಪ್ರಸಾದ್- ಬೆಳ್ಳಾರೆ ಠಾಣೆ, ಶಮೀರ್ ಕೆ- ಬೆಳ್ಳಾರೆ ಠಾಣೆ, ಮುಂತಾದವರ ಗಡಿಪಾರು ಮಾಡಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.