ಮಂಗಳೂರು, ಜೂ. 0 5: 2025ರ ಜುಲೈ 03ರಂದು ಸೈಂಟ್ ಅಲೋಶಿಯಸ್ (ಮಾನ್ಯ ವಿಶ್ವವಿದ್ಯಾನಿಲಯ), ಎಐಎಮ್ ಐಟಿ ಕೇಂದ್ರ ಮತ್ತು ಐ ಬಿ ಎಮ್ ನಡುವಿನ ಒಡಂಬಡಿಕೆಯನ್ನು ಅಧಿಕೃತವಾಗಿ ಸಹಿ ಹಾಕಲಾಯಿತು. ಈ ಸಹಿ ಸಮಾರಂಭದಲ್ಲಿ ಎಐಎಮ್ ಐಟಿ ಕೇಂದ್ರದ ನಿರ್ದೇಶಕರಾದ ಡಾ. ಫಾ. ಕಿರಣ್ ಕೋಟ, ಐ ಬಿ ಎಮ್ ನ ಸಾಫ್ಟ್ವೇರ್ ಸೇವೆಗಳ ರಾಷ್ಟ್ರೀಯ ನಿರ್ವಾಹಕರು ಶ್ರೀ ಜಗದೀಶ್ ಭಟ್, ಐ ಬಿ ಎಮ್ ನ ಪ್ರಾದೇಶಿಕ ನಿರ್ವಾಹಕರು ಶ್ರೀ ಮಧುಸೂಧನ್, ಟೆಕ್ಪಾಥ್ನ ಪ್ರಾದೇಶಿಕ ನಿರ್ವಾಹಕ ಶ್ರೀ ಜಿತೇಶ್ ಹಾಗೂ ಎಐಎಮ್ ಐಟಿ ನ ಡೀನ್ಗಳಾದ ಡಾ. ರಜನಿ ಸುರೇಶ್ ಮತ್ತು ಡಾ. ಹೆಮಲತಾ ಎನ್. ಭಾಗವಹಿಸಿದ್ದರು.
ಈ ಒಡಂಬಡಿಕೆಯು ವಿದ್ಯಾರ್ಥಿಗಳು ಹಾಗೂ ಬೋಧಕರು ಐ ಬಿ ಎಮ್ ನ ಶ್ರೇಷ್ಠ ಸಾಫ್ಟ್ವೇರ್ಗಳ ಬಳಕೆಯ ಮೂಲಕ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು. ಐ ಬಿ ಎಮ್ ಸಾಫ್ಟ್ವೇರ್ಗಳನ್ನು ಆಧಾರವಾಗಿಟ್ಟುಕೊಂಡು ನವೀನ ಪಠ್ಯಕ್ರಮಗಳನ್ನೂ ಉದ್ಯಮ ಸಂಬಂಧಿತ ವಿಭಿನ್ನ ತಂತ್ರಜ್ಞಾನಗಳನ್ನೂ ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ ಐ ಬಿ ಎಮ್ ಅಥವಾ ಅದರ ವ್ಯವಹಾರ ಪಾಲುದಾರ ಸಂಸ್ಥೆಗಳ ಉದ್ಯಮ ತಜ್ಞರಿಂದ ನೈಜ ಅನುಭವದಿಂದ ಕಲಿಯುವ ಅವಕಾಶವೂ ಲಭ್ಯವಾಗುತ್ತದೆ. ಅಂತೆಯೇ, ವಿದ್ಯಾರ್ಥಿಗಳು ಹಾಗೂ ಬೋಧಕರು ಐ ಬಿ ಎಮ್ ಸಾಫ್ಟ್ವೇರ್ ಆಧಾರಿತ ವೃತ್ತಿಪರ ಮತ್ತು ಜಾಗತಿಕ ಪ್ರಮಾಣಪತ್ರಗಳನ್ನು ಪಡೆದು ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಯಲು ಈ ಒಡಂಬಡಿಕೆ ನೆರವಾಗಲಿದೆ.
ಐ ಬಿ ಎಮ್ ಹಾಗೂ ಸೈಂಟ್ ಅಲೋಶಿಯಸ್ ನಿರ್ವಹಣಾ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (ಎಐಎಮ್ ಐಟಿ) ಐಟಿ/ಎಂಬಿಎ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ ಐ ಬಿ ಎಮ್ ಸಾಫ್ಟ್ವೇರ್ ಕೌಶಲ್ಯದ ಅಗತ್ಯವನ್ನು ಅರಿತಿವೆ. ಈ ಸಹಯೋಗದ ಉದ್ದೇಶ, ಐ ಬಿ ಎಮ್ ಸಾಫ್ಟ್ವೇರ್ನಲ್ಲಿ ತಜ್ಞರಾಗಿರುವ ಪದವೀಧರರನ್ನು ಹೆಚ್ಚಿಸುವುದು. ಐ ಬಿ ಎಮ್ ಮತ್ತು ಎಐಎಮ್ ಐಟಿ ಎರಡು ಸಂಸ್ಥೆಗಳು ಈ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮದ ಕ್ಷೇತ್ರದಲ್ಲಿ ಯಶಸ್ವಿ ಭವಿಷ್ಯ ನಿರ್ಮಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶವಾಗಿದೆ.