ಮಂಗಳೂರು,ಜೂ, 13 : ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭಾರತದ ಲೆಕ್ಕಪರಿಶೋಧಕರ ಸಂಸ್ಥೆ ಮಂಗಳೂರು ಶಾಖೆ ವತಿಯಿಂದ ಬೋರ್ಡ್ ಆಫ್ ಸ್ಟಡೀಸ್, ಐಸಿಎಐ ಮುಂದಾಳತ್ವದಲ್ಲಿ ‘ವಿಮರ್ಶ್’ ಎಂಬ ಶೀರ್ಷಿಕೆಯಡಿಯಲ್ಲಿ ಸಿಎ ವಿದ್ಯಾರ್ಥಿಗಳ ಮೆಗಾ ಸಮ್ಮೇಳನ ಶುಕ್ರವಾರ ಜರಗಿತು.
ಮೆಗಾ ಸಮ್ಮೇಳನವನ್ನು ಯುನಿಕೋರ್ಟ್ ಐಎನ್ಸಿ, ಸಂಸ್ಥಾಪಕ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಪ್ರಶಾಂತ್ ಶೆಣೈ ಕಟ್ಟಾಡಿ ಅವರು ಉದ್ಘಾಟಿಸಿದರು. ನಂತರ ಸಿಎ ವಿದ್ಯಾರ್ಥಿಗಳಿಗೆ ಪ್ರೆಸೆಂಟೇಶನ್ ನೀಡಿದರು.
ಸಮ್ಮೇಳನದ ನಿರ್ದೆಶಕರು, ಐಸಿಎಐ ಸೆಂಟ್ರಲ್ ಕೌನ್ಸಿಲ್ ಮೆಂಬರ್ ಸಿಎ. ಮದುಕರ್ ನಾರಾಯಣ ಹಿರೆಗಂಗಾ ಮತ್ತು ಎಸ್ಐಸಿಎಎಸ್ ಅಧ್ಯಕ್ಷ ಬಂಟ್ವಾಳ ನಿತಿನ್ ಬಾಳಿಗ ಅವರು ಮಾತಾಡಿದರು.
ಈ ಸಮ್ಮೇಳನದಲ್ಲಿ ಐಸಿಎಐ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರು ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದ ನಡೆಯಿತು. ಹಾಗೇನೆ ವಿದ್ಯಾರ್ಥಿಗಳು, ಮಾರ್ಗದರ್ಶಕರು ಮತ್ತು ಉದ್ಯಮ ತಜ್ಞರ ಪರಸ್ಪರ ಸಂವಾದ ಕಾರ್ಯಕ್ರಮ ನಡೆಯಿತು.ವಿವಿಧ ತಜ್ಞರಿಂದ ಅಧಿವೇಶನಗಳು, ಗುಂಪು ಚರ್ಚೆಗಳು ನಡೆದವು.
ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಪ್ರಶಾಂತ್ ಪೈ ಕೆ. ಅವರು ಪ್ರಾಸ್ತಾವಿಕವಾಗಿ ಮಾತಾಡಿದರು.ವೇದಿಕೆಯಲ್ಲಿ ಶಾಖೆಯ ಉಪಾಧ್ಯಕ್ಷ ಡ್ಯಾನಿಯಲ್ ಮಾರ್ಷ್ ಪೆರೇರಾ, ಉಪಾಧ್ಯಕ್ಷೆ ಭೂಮಿಕಾ, ಕಾರ್ಯದರ್ಶಿ ಮಮ್ತಾ ರಾವ್, ಎಸ್ಐಸಿಎಎಸ್ ಅಧ್ಯಕ್ಷ ಬಂಟ್ವಾಳ ನಿತಿನ್ ಬಾಳಿಗ ಉಪಸ್ಥಿತರಿದ್ದರು.