ಮಂಗಳೂರು, ಜೂ. 22: ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗ ದಲ್ಲಿ ಮಾವು -ಹಲಸು ಮೇಳ ನಗರದ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದ ಆವರಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಿತು.
ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ ಅವರು ಆಶೀರ್ವಚನ ನೀಡಿದರು. ಮಾವು -ಹಲಸು ಮೇಳ ಉದ್ಘಾಟಿಸಿದ ಆರೂರು ಲಕ್ಷ್ಮೀ’ ರಾವ್ ಮಾತನಾಡಿ, ಪ್ರಕೃತಿಯಲ್ಲಿ ಸಿಗುವ ಮಾವು ಮತ್ತು ಹಲಸು ಆರೋಗ್ಯಕರ ಹಣ್ಣುಗಳಾಗಿದ್ದು, ನಮ್ಮ ಆಹಾರ ಪದ್ಧತಿಯನ್ನು ನೆನಪಿಸಲು ಇಂತಹ ಮೇಳಗಳು ಪೂರಕ ಎಂದರು.
ಶರವು ದೇವಸ್ಥಾನದ ಶಿಲೆ ಶಿಲೆ ಮೊತ್ತೇಸರ ರಾಘವೇಂದ್ರ ಶಾಸ್ತ್ರಿ , ಶಾರದಾ ಸಮೂಹ ಸಂಸ್ಥೆಗಳ ಪ್ರೊ| ಎಂ.ಬಿ. ಪುರಾಣಿಕ್, ಶಾಸಕ ಡಿ. ವೇದವ್ಯಾಸ ಕಾಮತ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸ್ವದೇಶಿ ಗೋವುಗಳ ಹಾಗೂ ಪ್ರಾದೇಶಿಕ ಸಸ್ಯಗಳ ತಳಿ ಸಂರಕ್ಷಕ ಡಾ| ಮನೋಹರ ಉಪಾಧ್ಯಾಯ ಅವರು ಆಹಾರ ಪದ್ಧತಿ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷಪಿ.ಬಿ. ಹರೀಶ್ ರೈ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ ಅನಿವಾಸಿ ಭಾರತೀಯ ಉದ್ಯಮಿ ಮ್ಯಾಥ್ಯ,ವಿಜಯಲಕ್ಷ್ಮೀ ಶೆಟ್ಟಿ ಜನಾರ್ದನ ಹಂದೆ, ಸಾವಯವ ಬಳಗದ ರತ್ನಾಕರ ಕುಳಾಯಿ, ಶರತ್ ಕುಮಾರ್, ವಿನೋದಾ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಝೇಂಕಾರ ಬಳಗದವರಿಂದ ಪರಿಸರ ಗೀತೆ, ದಾಸ ಕೀರ್ತನೆ, ಭಾಗವತ ಪ್ರವಚನ ಮುಂತಾದ ಕಾರ್ಯಕ್ರಮಗಳು ನಡೆಯಿತು.
ಎರಡು ದಿನ ನಡೆಯಲಿರುವ ಈ ಪ್ರದರ್ಶನದಲ್ಲಿ ಹೊರ ಜಿಲ್ಲೆ ಹಾಗೂ ಜಿಲ್ಲೆಯ ನಾನಾ ಕಡೆಗಳಿಂದ ಸಾವಯವ ಕೃಷಿಕರು, ಮಾವು- ಹಲಸು, ರಾಂಬುಟಾನ್, ಅವಕಾಡೊ, ಡ್ರಾಗನ್ಫ್ರಟ್ ಬೆಳೆಯುವ ರೈತರು ತಮ್ಮ ಉತ್ಪನ್ನಗಳು ಹಾಗೂ ಸಸಿಗಳೊಂದಿಗೆ ಆಗಮಿಸಿದ್ದಾರೆ.