ಮಂಗಳೂರು, ಸೆ. 28 : ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಡಿ ವತಿಯಿಂದ ಲಯನ್ಸ್ ಸದಸ್ಯರು ಮತ್ತು ಆಯ್ದ ಹುಲಿ ವೇಷ ತಂಡಗಳಿಂದ ಸಿಂಹದ ಕಲೊಟು ಪಿಲಿ ಗೊಬ್ಬು 3ನೇ ಆವೃತ್ತಿ ಸೆ. 27, ಶನಿವಾರ ಕದ್ರಿ ಮೈದಾನದಲ್ಲಿ ನಡೆಯಿತು. ಹುಲಿ ವೇಷ ಕುಣಿತಗಳ ಮೆರವಣಿಗೆ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಿಂದ ಕದ್ರಿ ಬಯಲು ರಂಗಮಂಟಪಕ್ಕೆ ಆಗಮಿಸಿತು.
ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ 317 ಇದರ ಗವರ್ನರ್ ಅರವಿಂದ ಶೆಣೈ ಮತ್ತು ಮಮತಾ ಶೆಣೈ ದಂಪತಿ ಇತರ ಗಣ್ಯರೊಂದಿಗೆ ಸೇರಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ ಅವರು ಹುಲಿ ಕುಣಿತ ಆಯೋಜಿಸುವ ಮೂಲಕ ತುಳುನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಭಾ ಕಾರ್ಯಕ್ರಮದಲ್ಲಿ ಹುಲಿವೇಷಕ್ಕೆ ಸಂಬಂಧಪಟ್ಟ ಒಂಭತ್ತು ಮಂದಿ ಆಯ್ದ ದಿಗ್ಗಜರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಯಿತು.ಅಂದು ಬೆಳಿಗ್ಗೆ ಬಿಜೈ ನೋಡು ಭಟ್ಟಗುಡ್ಡೆಯಲ್ಲಿರುವ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ಊದು ಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಮುಖ್ಯಸ್ಥ ಡಾ| ಮೋಹನ ಆಳ್ವ ಅತಿಥಿಗಳಾಗಿ ವಿ.ವಿ. ಕೃಷ್ಣ ರೆಡ್ಡಿ, ಸಂಜಿತ್ ಶೆಟ್ಟಿ ಮೋಹನ್ ಕುಮಾರ್, ಸದಾನಂದ ಶೆಟ್ಟಿ,ನಿಹಾಲ್ ತಾವ್ರೋ, ನಿಕಟಪೂರ್ವ ಗವರ್ನರ್ ಬಿ.ಎಂ. ಭಾರತಿ, ತಾರನಾಥ್ ಕೊಪ್ಪ ಗೋವರ್ಧನ್ ಶೆಟ್ಟಿ, ಜ್ಯೋತಿ ಶ್ರೀಧರ ಶೆಟ್ಟಿ ನಿಖಿಲ್ ಶೆಟ್ಟಿ, ಲೋಕೇಶ್, ಮನೋರಂಜನ್,ಸುಜಿತ್ ಕುಮಾರ್ ಉಪಸ್ಥಿತರಿದ್ದರು.
ಇಂಟರ್ನ್ಯಾಶನಲ್ ಜಿಲ್ಲಾ 317 ಡಿ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಪ್ರಸ್ತಾವಿಸಿದರು. ಪ್ರಧಾನ ಸಂಯೋಜಕ ಗಣೇಶ್ ಶೆಟ್ಟಿ ಸ್ವಾಗತಿಸಿದರು. ಬಳಿಕ ಆಯ್ದ ಹುಲಿ ವೇಷದ ತಂಡಗಳಿಂದ ಹುಲಿ ಕುಣಿತ
ಪ್ರದರ್ಶನಗೊಂಡಿತು.