ದೇರಳಕಟ್ಟೆ, ಅ. 16 :: ಸ್ಥಳೀಯರ ಹಾಗೂ ಉದ್ಯೋಗಿಗಳ ಅನುಕೂಲಕ್ಕಾಗಿ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ಅನ್ನು ಆರಂಭಿಸಲಾಗಿದ್ದು, ಕ್ಲಿನಿಕ್ ಉದ್ಘಾಟನೆಯನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಪ್ರೊ. ಎಂ. ಶಾಂತಾರಾಮ ಶೆಟ್ಟಿ ಅವರು ಬುಧವಾರ ನೆರವೇರಿಸಿದರು.
ಬಳಿಕ ಮಾತಾಡಿದ ಅವರು , ಕೆ. ಎಸ್. ಹೆಗ್ಡೆ ಆಸ್ಪತ್ರೆ ಸ್ಥಳೀಯರ ಅನುಕೂಲಕ್ಕಾಗಿ ಸಂಜೆ 5 ರಿಂದ ರಾತ್ರಿ 7.30ರವರೆಗೆ ‘ಈವ್ನಿಂಗ್ ಸ್ಪೆಷಲ್ ಕ್ಲಿನಿಕ್’ನ್ನು ಆಸ್ಪತ್ರೆಯ ಗೌಂಡ್ ಫ್ಲೋರ್ನಲ್ಲಿ ಆರಂಭಿಸಲಾಗಿದೆ. ಕೇವಲ ರೂ.50 ನೋಂದಣಿ ಶುಲ್ಕ ಮಾತ್ರ ಪಡೆಯಲಾಗುತ್ತದೆ. ಈ ಕ್ಲಿನಿಕ್ನಲ್ಲಿ ಎಲ್ಲಾ ತಜ್ಞ ವೈದ್ಯರುಗಳ ಸೇವೆ ಲಭ್ಯವಿರುತ್ತದೆ. ಈಗಾಗಲೇ ಕೆ. ಎಸ್. ಹೆಗ್ಡೆ ಆಸ್ಪತ್ರೆ 1200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯಾಗಿದ್ದು, ಬೆಡ್ ಸ್ಕ್ಯಾನ್, ಎಂ.ಆರ್.ಐ., ರೊಬೊಟಿಕ್ ಸರ್ಜರಿ, 17 ಸುಸಜ್ಜಿತ ಆಪರೇಷನ್ ಥಿಯೇಟರ್ ಗಳ ವ್ಯವಸ್ಥೆ ಒಳಗೊಂಡಿದೆ. ಎಲ್ಲಾ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ವಿಭಾಗದ ಸಹಕುಲಾಧಿಪತಿ ವಿಶಾಲ್ ಹೆಗ್ಡೆ, ಕುಲಸಚಿವ ಎಂ.ಎಸ್ ಮೂಡಿತ್ತಾಯ, ಎಲುಬು ಮತ್ತು ಕೀಲು ವಿಭಾಗ ಮುಖ್ಯಸ್ಥರು ಡಾ.ವಿಕ್ರಮ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್ ಶೆಟ್ಟಿ, ಅಲೈಡ್ ಹೆಲ್ಸತ್ ಸೈನ್ಸ್ ಡೀನ್ ಡಾ.ಜೆ.ಪಿ ಶೆಟ್ಟಿ ಉಪಸ್ಥಿತರಿದ್ದರು.