ಮಂಗಳೂರು, ಸೆ.17: ರಾಜ್ಯ ದೇವಾಡಿಗರ ಸಂಘದ ವತಿಯಿಂದ ಸೆ.20ರಂದು ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ ಕಾರ್ಯಕ್ರಮ ಬೆಳಗ್ಗಿನಿಂದ ರಾತ್ರಿಯವರೆಗೆ ನಿರಂತರವಾಗಿ ನಡೆಯಲಿದೆ ಎಂದು ರಾಜ್ಯ ದೇವಾಡಿಗ ಸಂಘದ ಪ್ರ.ಕಾರ್ಯದರ್ಶಿ ವೀಣಾ ಗಣೇಶ್ ಅವರು ಪ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ವಿ. ದೇವಾಡಿಗ, ಶತಮಾನೋತ್ಸವ ಆಚರಣೆ ಗೌರವಾಧ್ಯಕ್ಷರಾದ ಹರೀಶ್ ಶೇರಿಗಾರ್, ಮುಖ್ಯ ಅತಿಥಿಗಳಾಗಿ ಡಾ.ದೇವರಾಜ್ ಕೆ., ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್., ವಿಶ್ವ ದೇವಾಡಿಗ ಮಹಾಮ೦ಡಲದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರ್ಕೂರು ಇದರ ಅಧ್ಯಕ್ಷ ಅಣ್ಣಯ್ಯ ಬಿ.ಶೇರಿಗಾರ್,ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಡಾ. ಬಿ.ಎಸ್.ಶೇರಿಗಾರ್ ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್ ದಾಸ್, ದೇವಾಡಿಗ ಸಂಘ ಮುಂಬೈ ಅಧ್ಯಕ್ಷರು ರವಿ ಸುಬ್ಬಯ್ಯ ದೇವಾಡಿಗ, ಮಂಗಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರು ಕೆ.ಜೆ. ದೇವಾಡಿಗ, ಅಲ್ ಬಸ್ತಿ ಮತ್ತು ಮುಕ್ತಾ ಎಲ್ ಎಲ್ ಸಿ ದುಬೈ ವ್ಯವಸ್ಟಾಪಕ ನಿರ್ದೇಶಕರು ನಾರಾಯಣ್ ಎಂ. ದೇವಾಡಿಗ, ದೇವಾಡಿಗರ ಸಂಘ ದುಬೈ ಅಧ್ಯಕ್ಷರು ದಿನೇಶ್ ಕುಮಾರ್ ದೇವಾಡಿಗ, ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಮಾಜಿ ಪ್ರಾಂಶುಪಾಲರು ಬಾಬು ದೇವಾಡಿಗ ಆಂಗ್ಲಮೊಗರು, ಯು ಎಸ್ ಎ ಆಲ್ ಅಮೆರಿಕನ್ ತುಳು ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷರು ಭಾಸ್ಕರ್ ಶೇರಿಗಾರ್, ಯು ಎಸ್ ಎ ಕುಂದಾಪುರ ದೇವಾಡಿಗ ಮಿತ್ರ ಅಧ್ಯಕ್ಷರು ದಿನೇಶ್ ಚಂದ್ರಶೇಖರ್ ದೇವಾಡಿಗ ನಾಗೂರು, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಟ್ರಸ್ಟಿ ಸದಸ್ಯರು ಆಲೂರು ರಘುರಾಮ ದೇವಾಡಿಗ, ಎಲ್ ಜಿ ಫೌಂಡೇಶನ್ ಅಧ್ಯಕ್ಷರು ನಾಗರಾಜ್ ದೇವಾಡಿಗ ಪಡುಕೋಣೆ, ಸುರೇಶ್ ಚಂದಪ್ಪ ದೇವಾಡಿಗ ದುಬೈ, ಸಾಯಿ ನಿಧಿ ಗ್ರೂಪ್ ಆಫ್ ಹೋಟೆಲ್ಸ್ ಮು೦ಬೈ ಶೇಖರ್ ದೇವಾಡಿಗ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮ೦ಗಳೂರು ಅಧ್ಯಕ್ಷರು ಅಶೋಕ್ ಮೊಯ್ಲಿ ಇವರು ಉಪಸ್ಥಿತರಿರಲಿದ್ದಾರೆ ಎಂದರು.
ಸಂಜೆ 5:30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮ೦ತ್ರಿಗಳು ಡಾ.ಎಂ.ವೀರಪ್ಪ ಮೊಯ್ಲಿ, ಗೌರವ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ಶಾಸಕ ಡಿ. ವೇದವ್ಯಾಸ ಕಾಮತ್, ಶತಮಾನೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷರು ಹರೀಶ್ ಶೇರಿಗಾರ್, ವಿಷನ್ ಮಂಗಳ ಯೋಜನೆಯ ಗೌರವಾಧ್ಯಕ್ಷರು, ಡಾ.ದೇವರಾಜ್, ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷರು ಕೆ. ಅಶೋಕ್ ಮೊಯ್ಲಿ, ಮುಖ್ಯ ಅತಿಥಿಗಳಾಗಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞ, ಶ್ರೀನಿವಾಸ್ ಕಾಲೇಜು ಇಲ್ಲಿನ ಕುಲಾಧಿಪತಿಗಳು ಡಾ.ಎ. ಶ್ರೀನಿವಾಸ್ ರಾವ್, ನಿಟ್ಟೆ ಕುಲಾಧಿಪತಿಗಳು ವಿಶಾಲ್ ಹೆಗ್ಡೆ, ಡಾ.ಸಿ.ಪಿ. ಹಬೀಬ್ ರಹ್ಮಾನ್, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಎಂ.ಎನ್. ರಾಜೇಂದ್ರ ಕುಮಾರ್, ಎ.ಜೆ. ಗ್ರೂಪ್ ಆಫ್ ಕಂಪೆನೀಸ್ ಅಧ್ಯಕ್ಷರು ಡಾ. ಎ.ಜೆ ಶೆಟ್ಟಿ, ಬ೦ಟರ ಯಾನೆ ನಾಡವರ ಮಾತೃಸಂಘ ಅಧ್ಯಕ್ಷರು ಅಜಿತ್ ಕುಮಾರ್ ರೈ ಮಾಲಾಡಿ, ಬ್ಲೂ ರಾಯಲ್ ಗ್ರೂಪ್ ದುಬೈ ವ್ಯವಸ್ಥಾಪಕ ನಿರ್ದೇಶಕರು ರೊನಾಲ್ಡ್ ಮಾರ್ಟಿಸ್, ಕರ್ನಾಟಕ ಸ೦ಘ ಅಬುಧಾಬಿ ಅಧ್ಯಕ್ಷರು ಸರ್ವೋತ್ತಮ ಶೆಟ್ಟಿ, ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷರು ಕರುಣಾಕರ ಎಂ.ಹೆಚ್, ಗಣೇಶ್ ಶೆಟ್ಟಿ, ಜಗನ್ನಾಥ್ ಶೇರಿಗಾರ್, ಸಂಜೀತ್ ಶೆಟ್ಟಿ, ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಸಾಂಪ್ರದಾಯಿಕ ವಾದ್ಯಗಳ ಸಂಗಮದಲ್ಲಿ ನಾಗೇಂದ್ರ ಕುಡುಪು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಉದಯ್ ಶೇರಿಗಾರ್, ಅಲೆವೂರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಅವರ ತಂಡದಿಂದ ಸಾಂಪ್ರದಾಯಿಕ ವಾದ್ಯಗಳ ಅಪೂರ್ವ ಸಂಗಮ ಚೆಂಡೆ, ನಾಗಸ್ವರ, ಉಡುಕೆ, ಡೋಲು ಇದರ ವಿಶೇಷ ಪ್ರದರ್ಶನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ಅಶೋಕ್ ಮೊಯಿಲಿ, ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್., ಗೌರವಾಧ್ಯಕ್ಷರು ಹರೀಶ್ ಶೇರಿಗಾರ್, ಖಜಾಂಜಿ ಗೀತಾ ಕಲ್ಯಾಣಪುರ, ಕಾರ್ಯದರ್ಶಿ ಲೋಹಿತಾಕ್ಷ ಮರೋಳಿ, ವಿಷನ್ ಮಂಗಳ ಯೋಜನೆ ಗೌರವಾಧ್ಯಕ್ಷರು ಡಾ.ದೇವರಾಜ್ ಕೆ ಮತ್ತಿತರರು ಉಪಸ್ಥಿತರಿದ್ದರು.











