Author: admin

ಲಂಡನ್: ದುಬೈಯ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್(72) ಅವರು ತಮ್ಮ ಆರನೇ ಹೆಂಡತಿ ಹಯಾ ಬಿಂಟ್‌ ಅಲ್ ಹುಸೇನ್(47) ಅವರಿಗೆ ವಿಚ್ಛೇದನ ನೀಡಿದ್ದು, ಬ್ರಿಟನ್ ಹೈಕೋರ್ಟ್ ಅವರ ಅರ್ಜಿಯನ್ನು ಇತ್ಯರ್ಥಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ. ದುಬೈ ದೊರೆ ತಮ್ಮ ವಿಚ್ಛೇದಿತ ಪತ್ನಿಗೆ 5,527 ಕೋಟಿ ರೂ.ಗಳಷ್ಟು ಜೀವನಾಂಶ ಕೊಡಬೇಕು ಎಂದು ಬ್ರಿಟನ್‌ ಹೈಕೋರ್ಟ್ ತೀರ್ಪು ನೀಡಿದೆ. ಇದರಲ್ಲಿ 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾ ಬಿಂಟ್‌ ಅಲ್ ಹುಸೇನ್ ಗೆ ಪಾವತಿಸಬೇಕು ಎಂದು ಹೇಳಿದೆ. ರಶೀದ್ ಮತ್ತು ಹಯಾ ಬಿಂಟ್‌ ಅಲ್ ಹುಸೇನ್ ಅವರಿಗೆ ದಂಪತಿಗೆ ಅಲ್ ಜಲಿಲಿಯಾ(14) ಜಯದ್ (9) ಎಂಬ ಇಬ್ಬರು ಮಕ್ಕಳಿದ್ದಾರೆ.ಇನ್ನು ಈ ಎರಡು ಮಕ್ಕಳ ಶಿಕ್ಷಣಕ್ಕಾಗಿ 96 ಕೋಟಿ ರೂ., ಹಾಗೂ ಜವಾಬ್ದಾರಿ ನಿಭಾಯಿಸಲು 112 ಕೋಟಿ ರೂ. ವಾರ್ಷಿಕವಾಗಿ ನೀಡಬೇಕಿದ್ದು, ಇತರೆ ಅಗತ್ಯತೆಗಳಿಗೆ 2,907 ಕೋಟಿ ರೂ.ಗಳನ್ನು ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಇತರೆ ಅಗತ್ಯತೆಗಳಿಗೆ 2,907 ಕೋಟಿ…

Read More

ಮೈಸೂರು: ಕೊರೊನಾ ರೂಪಾಂತರಿ ಓಮಿಕ್ರಾನ್​ ವೈರಸ್​ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಾಣಿಸಿಕೊಂಡಿದೆ. ವಿದೇಶದಿಂದ ಬಂದಿದ್ದ 9 ವರ್ಷದ ಬಾಲಕಿಗೆ ಸೋಂಕು ತಗುಲಿದ್ದು ಸದ್ಯ ಸೋಂಕಿತ ಮಗುವಿಗೆ ಯಾವುದೇ ಲಕ್ಷಣಗಳಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಮೈಸೂರು ಮೂಲದ ಕುಟುಂಬದವರು ಸ್ವಿಡ್ಜರ್​​ಲ್ಯಾಂಡ್​​ನಲ್ಲಿ ನೆಲೆಸಿದ್ದರು. ಕ್ರಿಸ್​​ಮಸ್​ ಸಲುವಾಗಿ ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಬರುವ ಮುಂಚೆ ಅಬುಧಾಬಿಗೆ ಬಂದು ಎರಡು ದಿನ ತಂಗಿದ್ದರು. ನಂತರ, ಅವರು ಡಿ.19 ರಂದು ಮೈಸೂರಿಗೆ ಬಂದಿದ್ದರು ಎನ್ನಲಾಗಿದೆ. ಪ್ರಾಥಮಿಕ, ದ್ವಿತೀಯ ಸೋಂಕಿತರ ಪತ್ತೆ ಮಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.. ಈಗಾಗಲೇ ರಾಜ್ಯದ ದಕ್ಷಿಣಕನ್ನಡ, ಉಡುಪಿ, ಬೆಂಗಳೂರು, ಭದ್ರಾವತಿ ಮೊದಲಾದೆಡೆ ಸೋಂಕು ಕಾಣಿಸಿಕೊಂಡಿದ್ದು, ಇದೀಗಾ ಸೋಂಕು ಮೈಸೂರಿನಲ್ಲಿ ಕೂಡ ಪತ್ತೆಯಾಗಿದೆ.

Read More

ಮಂಗಳೂ ರು : ವೇಗಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ,ನಿರ್ದೇಶಕ ರಾಮ್ ಶೆಟ್ಟಿ ನಿರ್ದೇಶನದ ರೋಷನ್ ವೇಗಸ್ ನಿರ್ಮಾಣದ ‘ಏರೆಗಾವುಯೆ ಕಿರಿಕಿರಿ’ ತುಳು ಚಿತ್ರ ಡಿಸೆಂಬರ್ 24 ರಂದು ಮಂಗಳೂರಿನ ಪಿವಿಆರ್ ಸಿನಿಮಾಸ್, ಸಿನಿಪೋಲಿಸ್, ಬಿಗ್ ಸಿನಿಮಾಸ್, ಉಡುಪಿಯ ಕಲ್ಪನಾ ಥಿಯೇಟರ್, ಮಣಿಪಾಲದ ಭಾರತ್ ಮಾಲ್, ಕಾರ್ಕಳದ ರಾಧಿಕಾ, ಮಡಿಕೇರಿಯ ಸುಂಟಿಕೊಪ್ಪದ ಗಣೇಶ್ ಟಾಕೀಸ್ ಮತ್ತು ಬೆಳ್ತಂಗಡಿಯ ಭಾರತ್ ಚಿತ್ರಮಂದಿರದಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಪತ್ರೀಕಾಗೋಷ್ಠಿಯಲ್ಲಿ ನಟ ನವೀನ್ ಡಿ ಪಡೀಲ್ ಹೇಳಿದರು. ತುಳು ಚಲನಚಿತ್ರ ನಟ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ರೋಶನ್ ವೇಗಸ್, ಶ್ರದ್ಧಾ ಸಾಲಿಯಾನ್, ಪ್ರದೀಪ್ ಚಂದ್ರ, ಹರೀಶ್ ವಾಸು ಶೆಟ್ಟಿ, ಮೊಹಮ್ಮದ್ ನಹೀಂ, ಸಾಯಿ ಕೃಷ್ಣ ಕುಡ್ಲ, ಐಶ್ವರ್ಯಾ ಹೆಗ್ಡೆ, ಶೇಖರ್ ಭಂಡಾರಿ, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಮಣಿಬೆಟ್ಟು ಕೊಡೆಪದವು, ಸಂದೀಪ್ ಶೆಟ್ಟಿ ಸುನೀಲ್ ನೆಲ್ಲಿಗುಡ್ಡೆ, ಸರೋಜಿನಿ ಶೆಟ್ಟಿ, ರಘು ಪಾಂಡೇಶ್ವರ, ಪವಿತ್ರಾ ಶೆಟ್ಟಿ ಸೇರಿದಂತೆ…

Read More

ಮಂಗಳೂರು: ಎ.ಟಿ.ಎಮ್. ಕಿರುಚಿತ್ರ ತಾರೀಖು 22-12-2021ರಂದು ಕರಾವಳಿಯ ದೈಜಿ ವರ್ಲ್ಡ್  ಚಾನೆಲ್ ಇವರLOCALWOOD APPನಲ್ಲಿ  ಬಿಡುಗಡೆಗೊಳ್ಳಲಿದೆ. ಸಿನಿಮಾಭಿಮನಿಗಳು ಈ appನ್ನು ಡೌನ್ಲೋಡ್ ಮಾಡಿ ಕಿರು ಚಿತ್ರವನ್ನು ವೀಕ್ಷಿ ಸಬಹುದು.  ತುಕಾರಾಂ ಬಾಯಾರು ಇವರ ನಿರ್ಮಾಣದಲ್ಲಿ, ವರುಣ್ ಕುಮಾರ್ ಹೆಚ್ ಇವರ ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣ ವಾಗಿದೆ. ಈ ಚಿತ್ರದ ಛಾಯಾಗ್ರಹಣ ಗೋಕುಲಕೃಷ್ಣನ್, ಸಂಗೀತ ನಿರ್ದೇಶನ ಜಯಕಾರ್ತಿ, ಸಹನಿರ್ದೇಶಕ ಶರತ್ ಕಿರಣ್ ಟಿ, ಸಹ ಛಾಯಾಗ್ರಹಣ ಸೂರಜ್ ಶೆಟ್ಟಿ, ವಿನಯ್ ಶೆಟ್ಟಿಗಾರ್, ನಿರ್ಮಾಣ ವಿಭಾಗ ಅನುಸುಲ್ ಶೆಟ್ಟಿ ತಿಂಬರ, ಆದಿತ್ಯ ಶೆಟ್ಟಿ ತಿಂಬರ, ಪೋಸ್ಟರ್ ಡಿಸೈನ್ ತಾರಾನಾಥ ಆಚಾರ್ಯ ಮಾಡಿದ್ದಾರೆ. ಈ ಕಿರುಚಿತ್ರದಲ್ಲಿ ರಾಧಾಕೃಷ್ಣ ಕುಂಬ್ಳೆ, ಮೋಕ್ಷಿತ್ ಶೆಟ್ಟಿ, ವರ್ಷಾ ಸಿ ಮನೋಜ್, ಕಿರಣ್ ಆಚಾರ್ಯ, ಜ್ಯೋತಿಪ್ರಕಾಶ್ ಶೆಟ್ಟಿ, ಜಯರಾಮ ಆಚಾರ್ಯ ಹೊಸಂಗಡಿ, ವಿಜೇಶ್ ಬಿ.ಕೆ.ರೈ, ದಿವಾಕರ ಉಪ್ಪಳ, ಅರುಣ್ ಪ್ರಕಾಶ್ ರಾಜ್, ಸಂದೇಶ ಆಚಾರ್ಯ, ರಜನಿ ಚಂದ್ರಹಾಸ. ಇವರೆಲ್ಲರೂ ಅಭಿನಯಿಸಿದ್ದಾರೆ.

Read More

ಮಂಗಳೂರು: ನಮ್ಮೂರ ಆಟ ಕೂಟ ಟ್ರಸ್ಟ್ ನ ಉದ್ಘಾಟನಾ ಸಮಾರಂಭ ಹಾಗೂ ಸಾಧಕರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ರವಿವಾರ ಡಿ.05,ರಂದು ನಗರದ ಪುರಭವನದಲ್ಲಿ ಜರಗಿತು. ಶಾಸಕರಾದ ವೇದವ್ಯಾಸ ಕಾಮತ್ ಅವರು ಟ್ರಸ್ಟ್ನ ಉದ್ಘಾಟನೆ ನೆರವೇರಿಸಿದರು.ನಂತರ ಮಾತಾಡಿ ಮೂಲ್ಕಿ ಸುಂದರರಾಮ ಶೆಟ್ಟಿಯವರು ಬ್ಯಾಂಕಿಂಗ್ ಹಾಗೂ ಇತರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ ಇಂದು ಈ ವೇದಿಕೆಯಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡುವುದು ಉತ್ತಮ ಕಾರ್ಯ ಎಂದರು. ಮೂಲ್ಕಿ ಸುಂದರರಾಮ ಶೆಟ್ಟಿ ಅವರು ಒಬ್ಬ ಆದರ್ಶ ವ್ಯಕ್ತಿಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಲ್ಲಿಸಿದ ಅವರ ಸೇವೆಯು ಸದಾ ಸ್ಮರಣೀಯ ಎಂದು ಶ್ರೀ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ್ ಹೆಗ್ದೆ ಅವರು ಮಾತಾಡಿ ಬ್ಯಾಂಕಿಂಗ್ ಕ್ಷೇತ್ರದ ಅವರ ಸೇವೆ ಬಹಳ ಶ್ರೇಷ್ಠವಾದದ್ದು,ವಿಜಯ ಬ್ಯಾಂಕನ್ನು ಅವರು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ…

Read More

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಕೆಲವು ಜನರು ಕಾಲಿಗೆ ಗಾಯ ಆಗಿರುತ್ತದೆ. ಅದರಿಂದ ಕಾಲಿನಲ್ಲಿ ಬಾವು ಮತ್ತು ಊತ ಕಂಡು ಬಂದು ಅನೇಕ ರೀತಿಯಲ್ಲಿ ನೋವನ್ನು ಅನುಭವಿಸುತ್ತಾರೆ. ಹಾಗೆಯೇ ಊತವನ್ನು ಕಡಿಮೆ ಮಾಡಲು ಉರಿಯೂತ ಮತ್ತು ನೋವನ್ನು ನಿವಾರಿಸಲು ವ್ಯಾಯಾಮ ಮಾಡಬೇಕು ಅತ್ಯುತ್ತಮ ವ್ಯಾಯಾಮ [Exercise] ಗಳಲ್ಲಿ ಈಜು ಕೂಡ ಒಂದಾಗಿದೆ. ಈ ಒಂದು ವಾರದಲ್ಲಿ ಕನಿಷ್ಠ ಐದು ದಿನಗಳು ವಾಕಿಂಗ್ ಜಾಗಿಂಗ್ [Walking jogging] ಮೂವತ್ತು ನಿಮಿಷಗಳ ಕಾಲ ಮಾಡಬೇಕು. ಇದರಿಂದಲೂ ಊತ ಮತ್ತು ಬಾವುಗಳ ಸಮಸ್ಯೆಯನ್ನು ಹೋಗಲಾಡಿಸಬಹುದು. ಕಾಲಿನ ಗಾಯವಾಗಿ ಬಾವು ಮತ್ತು ಊತ ಸಂಭವಿಸುತ್ತವೆ ಅದರ ನಿವಾರಣಾ ಕ್ರಮವನ್ನು ತಿಳಿದುಕೊಳ್ಳೋಣ. ಕೆಲವೊಂದು ಸಮಯದಲ್ಲಿ ಕಾಲಿಗೆ ಪೆಟ್ಟು ಬಂದು ಕಾಲಿಗೆ ಬಾವು ಬಂದಿರುತ್ತದೆ. ಆ ಸಂಧರ್ಭದಲ್ಲಿ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಬಾವು ಕಡಿಮೆ ಮಾಡಿಕೊಳ್ಳಬಹುದು. ಕೆಂಪು ಮೆಣಸು [Red pepper] ಮತ್ತು ಹರಲೇಳೆ ಜಜ್ಜಿ ಲೇಪನ ಮಾಡಿಕೊಂಡು ಬಾವು ಆದ ಜಾಗದಲ್ಲಿ ಹಚ್ಚಬೇಕು. ಕೆಲವೇ…

Read More

ಕೆಎನ್‌ಎನ್‌ಡಿಜಿಟಲ್‌ಡೆಸಕ್‌: ಕೆಜಿಎಫ್2.. ಯಾವಾಗ ಈ ಸಿನಿಮಾದ ದರ್ಶನವಾಗುತ್ತೋ… ಆ ದಿವ್ಯ ಘಳಿಗೆಗೆ ಸಮಯ ಬೇಗ ಒದಗಿ ಬರಬಾರದಾ ಎಂದು ಸಿನಿ ಪ್ರೇಮಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 14ರಂದು ಕೆಜಿಎಫ್ 2 ರಿಲೀಸ್ ಆಗುತ್ತೆ ಅಂತ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಆದ್ರೆ ಅಷ್ಟು ದಿನಗಳನ್ನ ಕಾಯೋದಕ್ಕೂ ಫ್ಯಾನ್ಸ್ ಗೆ ಆಗ್ತಾ ಇಲ್ಲ. ಜಪ ಮಾಡಿಕೊಂಡು ಕೆಜಿಎಫ್ ಕೆಜಿಎಫ್ ಎಂದು ಜಪ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಖುಷಿಯ ಸುದ್ದಿ ಏನಪ್ಪ ಅಂದ್ರೆ ಲಾಲ್ ಸಿಂಗ್ ಚಡ್ಡಾ ನಮ್ಮ ಕೆಜಿಎಫ್ ಗೆ ಸಪೋರ್ಟ್ ಮಾಡ್ತೀನಿ ಎಂದಿದ್ದಾರೆ. ಎಸ್.. ಕೆಜಿಎಫ್ 1 ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಅಷ್ಟೇ ಕಾತುರ ಕೆಜಿಎಫ್2 ನೋಡಲು ಎಲ್ಲರಲ್ಲೂ ಕಾಣ್ತಿದೆ. ಆದ್ರೆ ಈ ಮಧ್ಯೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಸಿನಿಮಾಗೆ ಸಪೋರ್ಟ್ ಮಾಡ್ತೀನಿ ಅಂತ ಹೇಳಿರೋ ಮಾತು ಎಲ್ಲರನ್ನ ಮತ್ತಷ್ಟು ಖುಷಿಗೊಳಿಸಿದೆ. ನನ್ನಿಂದ ಸಿನಿಮಾಗೆ ಏನು ಸಪೋರ್ಟ್ ಬೇಕಿದ್ದರು ಕೇಳಿ ಮಾಡ್ತೇನೆ ಅಂತ ಹೇಳಿದ್ದೀನಿ ಅಂತ…

Read More

ಬೆಂಗಳೂರು: ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನಟಿ ಶೃತಿ ಹರಿಹರನ್‌ಗೆ ಪೊಲೀಸರಿಂದ ನೋಟಿಸ್‌ ನೀಡಲಾಗಿದೆಯಂತೆ. 2018ರಲ್ಲಿ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಕೇಸು ದಾಖಲು ಮಾಡಿದ್ದ ಶ್ರುತಿ ಅವರ ದೂರಿನ್ವಯ ಅರ್ಜುನ್ ಸರ್ಜಾ ವಿರುದ್ಧ ಭಾರತೀಯ ದಂಡ ಸಂಹಿತೆ 354, 354 ಎ ಮತ್ತು 506 ಸೆಕ್ಷನ್​ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈಗ ಶೃತಿ ಅವರು ಸಲ್ಲಿಸಿದ್ದ ದೂರಿಗೆ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ‘ಬಿ’ರಿಪೋರ್ಟ್ ಸಲ್ಲಿಸಿಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಪ್ರಕರಣದ ದೂರುದಾರರಿಗೆ ಮಾಹಿತಿ ನೀಡಬೇಕಾರಿರುವ ಹಿನ್ನಲೆಯಲ್ಲಿ, ಶ್ರುತಿ ಹರಿಹರನ್​ಗೆ ಕಬ್ಬನ್​ ಪಾರ್ಕ್​ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ. ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಸರ್ಜಾ ವಿರುದ್ಧ ಶ್ರುತಿ ಆರೋಪಿಸಿ ದೂರು ನೀಡಿದ್ದರು, ನಾಲ್ಕು ವರ್ಷಗಳ ಬಳಿ ಇದೀಗ ಪೊಲೀಸರು ಠಾಣೆಗೆ ಬರುವಂತೆ ಸೂಚನೆ ನೀಡಿದ್ದು, ಈಗ ಮತ್ತೆ ಇಬ್ಬರ ಪ್ರಕರಣ ಚಾಲ್ತಿಗೆ ಬಂದಿದೆ

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಜನರ ಗುಂಪೊಂದು ರನ್‌ವೇಯಿಂದ ವಿಮಾನವನ್ನು ತಳ್ಳುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನೇಪಾಳದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಬುಧವಾರ ತಾರಾ ಏರ್ ವಿಮಾನವನ್ನು ತಳ್ಳುತ್ತಿರುವುದನ್ನು ಚಿತ್ರೀಕರಿಸಲಾಗಿದೆ ಅಂತ ತಿಳಿದು ಬಂದಿದೆ. ನೇಪಾಳದ ಸುದ್ದಿಗಳ ಪ್ರಕಾರ, ಕೋಲ್ಟಿಯ ಬಾಜುರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನದ ಹಿಂಭಾಗದ ಟೈರ್ ಸ್ಫೋಟಗೊಂಡಿತು, ಇದರಿಂದಾಗಿ ರನ್‌ವೇಯಿಂದ ಚಲಿಸಲು ಸಾಧ್ಯವಾಗಲಿಲ್ಲ. ವಿಮಾನವನ್ನು ರನ್‌ವೇಯಿಂದ ಸರಿಸಲು ಸುಮಾರು 20 ಜನರ ಗುಂಪು ಒಟ್ಟಾಗಿ ಕೆಲಸ ಮಾಡುವುದನ್ನು ವೈರಲ್‌ ವಿಡಿಯೋದಲ್ಲಿ ಕಾಣಬಹುದಾಗಿದೆ.

Read More