Subscribe to Updates
Get the latest creative news from FooBar about art, design and business.
Author: admin
ಕೈಕಂಬ, ಮಾ. 15 : ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಮಾರ್ಚ್ 9 ರಿಂದ 16ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ವೇ। ಮೂ। ಕೃಷ್ಣರಾಜ ತಂತ್ರಿ, ದೇಗುಲದ ಪವಿತ್ರಪಾಣಿ ರಮೇಶ್ ಉಡುಪ ಹಾಗೂ ಪ್ರಧಾನ ಅರ್ಚಕ ಎ. ಸದಾಶಿವ ಭಟ್, ಮಹೇಶ್ ಭಟ್ ಉಪಸ್ಥಿತಿಯಲ್ಲಿ ನವಗ್ರಹ ಶಾಂತಿ, ಸ್ವ ಶಾಂತಿ, ಚೋರ ಶಾಂತಿ, ಅದ್ಭುತ ಶಾಂತಿ ಹೋಮಗಳು, ಬೆಳಗ್ಗೆ 11ರ ವೃಷಭ ಲಗ್ನ ಸುಮುಹೂರ್ತದಲ್ಲಿ ನವಗ್ರಹ, ಶ್ರೀ ಶಾಸ್ತಾ ದೇವರ, ಮುಂಡಿತ್ತಾಯ ದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷಸುಜಿತ್ ಆಳ್ವ ಬೈಲು ಏತಮೊಗರು ಗುತ್ತು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ, ಮುಂಬಯಿ ದೇಗುಲದ ರಕ್ಷಕ ಮನೆತನದ ರಮಾನಾಥ ಅತ್ತಾರ್ಏತಮೊಗರು, ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಅಧ್ಯಕ್ಷ ಪ್ರಕಾಶ್ ಬಿ. ಭಂಡಾರಿ, ಉಪಾಧ್ಯಕ್ಷ ಸದಾನಂದ ಡಿ.ಶೆಟ್ಟಿಸಂಕೇಶ, ವ್ಯವಸ್ಥಾಪನ, – ಜೀರ್ಣೋ ದ್ಧಾರ, ಬ್ರಹ್ಮಕಲಶೋತ್ಸವ…
ಮೂಡುಬಿದಿರೆ,ಮಾ.14 : ಕರ್ನಾಟಕ, ಗೋವಾ ರಾಜ್ಯಗಳಲ್ಲಿ ತನ್ನ ಚಿಕಿತ್ಸಾ ಕೇಂದ್ರಗಳನ್ನು ಹೊಂದಿರುವ ಪ್ರಸಾದ್ ನೇತ್ರಾಲಯದ ನೂತನ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಮೂಡುಬಿದರೆಯ ಜೈನ್ಸಟೆ ಬಡಗ ಬಸದಿ ಎದುರಿನ ಫಾರ್ಚೂನ್-2 ಬಹುಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ಮಾ.16ರಂದು ಶುಭಾರಂಭಗೊಳ್ಳಲಿದೆ ಎಂದು ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಪ್ರಸಾದ್ ನೇತ್ರಾಲಯವು ಉಡುಪಿ, ಮಂಗಳೂರು, ಸುಳ್ಯ ತೀರ್ಥಹಳ್ಳಿ ಶಿವಮೊಗ್ಗ, ಗೋವಾ, ಪುತ್ತೂರು ಹಾಗೂ ಕಾಸರಗೋಡುನಲ್ಲಿ ಚಿಕಿತ್ಸಾ ಕೇಂದ್ರಗಳ ಮೂಲಕ ಜನರಿಗೆ ಸೇವೆಯನ್ನು ನೀಡುತ್ತಿದೆ. ನೇತ್ರ ಚಿಕಿತ್ಸೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳನ್ನು ಅಳವಡಿಸಿಕೊಂಡು ತಜ್ಞ ವೈದ್ಯರು ಹಾಗೂ ತಾಂತ್ರಿಕ ಸಹಾಯಕರ ತಂಡದೊಂದಿಗೆ ಚಿಕಿತ್ಸೆ ನೀಡುತ್ತಿದೆ ಎಂದರು. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ನೂತನ ಚಿಕಿತ್ಸಾ ಕೇಂದ್ರವು ಮೂಡುಬಿದರೆ ಜೈನ್ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಅವರು ಆಶೀರ್ವದಿಸುವ ಮೂಲಕ ಶುಭಾರಂಭಗೊಳಿಸಲಿದ್ದಾರೆ. ನೂತನ ಆಸ್ಪತ್ರೆಯ ಉದ್ಘಾಟನೆಯನ್ನು ಆಳ್ವಾಸ್ ಎಜುಕೇಷನ್…
ಮಂಗಳೂರು,ಮಾ.13: ಕರ್ನಾಟಕ ಕೊಂಕಣಿ ಸಾಹಿತ್ಯ ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನ್ ಮೈಸೂರು ಸಹಯೋಗದೊಂದಿಗೆ 23 ಮಾರ್ಚ್ 2025, ಆದಿತ್ಯವಾರ ಸಂಜೆ 5.00 ಗಂಟೆಗೆ ಕೊಂಕಣ್ ಭವನ್, ವಿಜಯನಗರ್ 2nd ಸ್ಟೇಜ್,ಮೈಸೂರಿನಲ್ಲಿ2024ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಜರುಗಲಿರುವುದು ಎಂದು ಸ್ಟಾನಿ ಅಲ್ವಾರಿಸ್ ಅವರು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ವರ್ಷವಾರು ಕೊಂಕಣಿ ಸಾಹಿತ್ಯ, ಕಲೆ, ಜಾನಪದ ಈ ಮೂರು ಕ್ಷೇತ್ರದಲ್ಲಿ ಸಾಧನೆಗೈದ ಕೊಂಕಣಿ ಮಹನೀಯರನ್ನು ಗೌರವಿಸಲಾಗುತ್ತಿದ್ದು ಪ್ರಸ್ತುತ ಸಾಲಿನಲ್ಲಿ 2024 ನೇ ಸಾಲಿನ ಗೌರವ ಪ್ರಶಸ್ತಿಗಾಗಿ ಹಾಗೂ ಪುಸ್ತಕ ಪುರಸ್ಕಾರಕ್ಕಾಗಿ ಈ ಕೆಳಗಿನ ಮಹಾನಿಯರನ್ನು ಆಯ್ಕೆ ಮಾಡಲಾಗಿದೆ. 2024ನೇ ಸಾಲಿನ ಗೌರವ ಪ್ರಶಸ್ತಿ: ಕೊಂಕಣಿ ಸಾಹಿತ್ಯ : ಮಂಗಳೂರಿನ ಶ್ರೀ ಎಂ. ಪ್ಯಾಟ್ರಿಕ್ ಮೊರಾಸ್, ಕೊಂಕಣಿ ಕಲೆ : ಮಂಗಳೂರಿನ ಶ್ರೀ ಜೊಯಲ್ ಪಿರೇರಾ, ಕೊಂಕಣಿ ಜಾನಪದ : ಹಳಿಯಾಳದ ಶ್ರೀಮತಿ ಸೊಬೀನಾ ಮೊತೇಶ್ ಕಾಂಬ್ರೆಕರ್, 2024ನೇ ಸಾಲಿನ ಪುಸ್ತಕ…
ಕಾಪು, ಮಾ.13:ಸ್ಕೂಟರ್ ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನಪ್ಪಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ಕಾಪುವಿನ ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಮಂಗಳಪೇಟೆಯಲ್ಲಿ ನಡೆದಿದೆ. ಕಾಪು ನಿವಾಸಿ ಪ್ರತೀಶ್ ಪ್ರಸಾದ್ (21) ಮೃತರು. ಗಂಭೀರವಾಗಿ ಗಾಯಗೊಂಡ ಸಹ ಸವಾರ ನಿಹಾಲ್ ವಿಲ್ಸನ್. ರಿತೇಶ್ ಶೆಟ್ಟಿ ಅವರು ನೀಡಿದ ದೂರಿನ ಪ್ರಕಾರ, ಕಾಪುದಿಂದ ಪಡುಬಿದ್ರಿಯ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನಪ್ಪಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಪ್ರತೀಶ್ ಅದಾಗಲೇ ಮೃತಪಟ್ಟಿರುತ್ತಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಮಾ. 11 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 59ನೇ ವಾರ್ಡಿನ ಜೆಪ್ಪು ಬಪ್ಪಾಲ್ ಶ್ರೀ ಜನಾರ್ದನ ಭಜನಾ ಮಂದಿರದ ಆವರಣದ ಮೇಲ್ಛಾವಣೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನೆರವೇರಿಸಲಾಯಿತು. ನಂತರ ಮಾತನಾಡಿದ ಶಾಸಕರು, ಈ ಭಜನಾ ಮಂದಿರಕ್ಕೆ ಮೇಲ್ಛಾವಣಿಯ ಅಗತ್ಯತೆ ಬಗ್ಗೆ ನಿಕಟಪೂರ್ವ ಸ್ಥಳೀಯ ಪಾಲಿಕೆ ಸದಸ್ಯ ಭರತ್ ಕುಮಾರ್ ರವರು ಗಮನಕ್ಕೆ ತಂದು ವಿಶೇಷ ಕಾಳಜಿ ವಹಿಸಿದ್ದರು. ಇದೀಗ ವಿಶೇಷ ಅನುದಾನದ ಮೂಲಕ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳುವ ಭರವಸೆಯಿದೆ ಎಂದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಶೈಲೇಶ್, ಪ್ರಮುಖರಾದ ನವೀನ್ ಶೆಟ್ಟಿ, ಪುಂಡಲಿಕ ಸುವರ್ಣ, ಸುನಿಲ್ ಕುಮಾರ್, ರಘುವೀರ್ ಆಚಾರ್ಯ, ಸತೀಶ್ ಆಚಾರ್ಯ, ಲಕ್ಷ್ಮಣ ಆಚಾರ್ಯ, ರಘುವೀರ್ ದೋಟ, ಪುಷ್ಪರಾಜ್ ಶೆಟ್ಟಿ, ಸುರೇಖಾ ರಾವ್, ದೇವಾನಂದ ಸನಿಲ್, ಶಿವಾನಂದ ರೈ, ಅಮಿತಾ ಕೆ, ರಾಜನ್ ಬಪ್ಪಾಲ್, ಸೀತಾರಾಮ ಪೂಜಾರಿ, ಪ್ರಶಾಂತ್ ಕನಕರ ಬೆಟ್ಟು, ಸೌರಭ್ ಮಜಿಲ…
ಕಾವೂರು, ಮಾ. 10 : ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಹ್ಮಕಲಶೋತ್ಸವವು ಮಾ, 1ರಿಂದ ಆರಂಭಗೊಂಡು 9ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳಿಂದ ಸಂಪನ್ನಗೊಂಡಿತು. ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವದ ಆರಂಭದಿಂದಲೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರಗಿದವು. ಮಾ.9, ರವಿವಾರ ಪ್ರಾತಃಕಾಲ 4.30ರಿಂದ ಕವಾಟ ಉದ್ಘಾಟನೆ, ತೈಲಾಭಿಷೇಕ ಪ್ರಾಯಶ್ಚಿತ್ತ ಶಾಂತಿ ಹೋಮ, ಕಲಶಾಭಿಷೇಕ, ತತ್ಪಕಲಶಾಭಿಷೇಕ, 6 ಗಂಟೆಯಿಂದ ಪರಿಕಲಶಾಭಿಷೇಕ ಪ್ರಾರಂಭ ಬೆಳಗ್ಗೆ 8.10ರಿಂದ 8.40ರ ಸಮಯದಲ್ಲಿ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಅವಸುತೋಕ್ಷಾ ಬಲಿ ನಡೆಯಿತು. ಬೆಳಗ್ಗೆ 11ರಿಂದ ಶ್ರೀ ದೇವರಿಗೆ ಮಹಾಪೂಜೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ವೈದಿಕ ಮಂತ್ರಾಕ್ಷತೆ, ಸಂಜೆ 7 ರಿಂದ ಶ್ರೀ ದೇವಿಗೆ ಮಹಾರಂಗಪೂಜೆ, ಬಲಿ ಉತ್ಸವ ನಡೆಯಿತು. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಬಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಕುಂದಾಪುರ, ಮಾ.10 : ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಆನಗಳ್ಳಿ ಎಂಬಲ್ಲಿ ನಡೆದಿದೆ. ಮೃತರನ್ನು ತ್ರಾಸಿಯ ಸಂದೀಪ(33) ಎಂದು ಗುರುತಿಸಲಾಗಿದೆ. ಮಾ. 7 ರಂದು ಮಧ್ಯಾಹ್ನ ಮೀನು ಹಿಡಿಯಲು ಮನೆಯಿಂದ ಹೋದ ಸಂದೀಪ ಅವರು ನಾಪತ್ತೆಯಾಗಿದ್ದರು. ಇಂದು ಮಾ. 09ರ ಬೆಳಗ್ಗೆ ಆನಗಳ್ಳಿ ಬ್ರಿಡ್ಜ್ ಬಳಿ ಹೊಳೆಯಲ್ಲಿ ಸಂದೀಪ್ ಅವರ ಮೃತದೇಹವು ಪತ್ತೆಯಾಗಿದೆ. ಸಂದೀಪ ಅವರು ಆನಗಳ್ಳಿ ಹೊಳೆಯಲ್ಲಿ ಮೀನು ಹಿಡಿಯುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು, ಮಾ. 07 : ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ‘ವೈಲ್ಡ್ ಲೈಫ್ ಸಫಾರಿ’ ಹಿಂದಿ ಮತ್ತು ಕನ್ನಡ ಚಿತ್ರದ ಮೂಹೂರ್ತ ಸಮಾರಂಭ ಶುಕ್ರವಾರ ನಡೆಯಿತು. ವಿ.ಕೆ. ಪಿಲಂ ಸ್ ರವರ ತನ್ನ ಎರಡನೇ ಪ್ರಾಜೆಕ್ಟ್ ‘ವೈಲ್ಡ್ ಟೈಗರ್ ಸಫಾರಿ’ ಚಲನಚಿತ್ರವನ್ನು ಘೋಷಿಸಿದೆ. ಈ ಸಂಸ್ಥೆಯ ಮೊದಲ ಚಿತ್ರ”ಕರಾವಳಿ” ಆಗಿದ್ದು, ಈ ಹೊಸ ಸಿನಿಮಾ ವಿನೋದ್ ಕುಮಾರ್ ಅವರ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬರುತ್ತಿದೆ. ಮಾಧ್ಯಮಗಳ ಜೊತೆ ಮಾತಾಡಿದ ಚಿತ್ರದ ನಿರ್ದೇಶಕ ಚಂದ್ರಮೌಳಿ ಅವರು, ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದ್ದು ಶೀಘ್ರದಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದರು. ನಾಯಕ ನಟ ಶಿಥಿಲ್ ಕುಮಾರ್ ಅವರು ಮಾತಾಡಿ, ಲವ್, ಆಕ್ಷನ್ ಸಿನಿಮಾ ಇದಾಗಿದೆ. ಕಥೆ ಕೇಳಿ ಥ್ರಿಲ್ ಆಗಿದ್ದೇನೆ ಎಂದರು. ರಾಜೇಶ್ ಭಟ್ ಸಿನಿಮಾಕ್ಕೆ ಕೆಮರಾ ಕ್ಲಾಫ್ ಮಾಡಿದರು.ಸಮಾರಂಭದಲ್ಲಿ ಸಿನಿಮಾ ನಿರ್ಮಾಪಕ ವಿನೋದ್ ಕುಮಾರ್, ನಾಯಕಿ ನಿಮಿಕಾ ರತ್ನಾಕರ್, ಬಾಲಿವುಡ್ ನ ನೃತ್ಯ ನಿರ್ದೇಶಕರಾದ ಧರ್ಮೇಶ್, ಸುಶಾಂತ್, ಕೆಮರಾಮ್ಯಾನ್ ಎಜೆ ಶೆಟ್ಟಿ, ಕಲಾ ನಿರ್ದೇಶಕ…
ಮಂಗಳೂರು, ಮಾ. 07 : ಸನ್ ಮ್ಯಾಟ್ರಿಕ್ಸ್ ಬ್ಯಾನರ್ನಡಿ ತಯಾರಾಗಿರುವ ಕೆ. ಸತ್ಯೇಂದ್ರ ಪೈ ನಿರ್ಮಾಣದ ‘ಸ್ಕೂಲ್ ಲೀಡರ್’ ಕನ್ನಡ ಚಲನಚಿತ್ರವು ಏಪ್ರಿಲ್ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ರಜಾಕ್ ಪುತ್ತೂರು ಅವರು ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕೂಲ್ ಲೀಡರ್ ಚಿತ್ರವು ಪ್ರೌಢಶಾಲಾ ಮಕ್ಕಳ ಶೈಕ್ಷಣಿಕ ಬದುಕು ಮತ್ತು ಮಕ್ಕಳಲ್ಲಿ ನಾಯಕತ್ವ ಗುಣ ಮೈಗೂಡಿಸಿಕೊಳ್ಳುವ ಕಥಾವಸ್ತು ಹೊಂದಿದೆ. ಶಾಲಾ ಚುನಾವಣೆ ಆಧರಿಸಿರುವ ಕಥೆ ಅಗಿರುವುದರಿಂದ ಇಡೀ ಸಿನಿಮಾವನ್ನು ಕಟಪಾಡಿಯ ಒಂದೇ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಸುಮಾರು 25 ಶಾಲೆಗಳ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ’ ಎಂದರು. ಪೆನ್ಸಿಲ್ ಬಾಕ್ಸ್ ಎಂಬ ಚಿತ್ರದ ನಿರ್ದೇಶಕ ರಜಾಕ್ ಪುತ್ತೂರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡು ಬರೆದಿದ್ದಾರೆ. ಚಿತ್ರದಲ್ಲಿ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ದೀಪಕ್ ರೈ, ರಮೇಶ್ ಭಟ್ ನಟಿಸಿದ್ದಾರೆ ಎಂದು ಸತ್ಯೇಂದ್ರ ಪೈ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ, ನಾಗೇಶ್ ಕಾಮತ್, ಬಾಲಕೃಷ್ಣ…
ಮಂಗಳೂರು, ಮಾ.6: ಸೈಂಟ್ ಅಲೋಶಿಯಸ್ ಪ್ರತಿಷ್ಠಾನಗಳು ಮತ್ತು ಸೈಂಟ್ ಅಲೋಶಿಯಸ್ ಕಾಲೇಜ್ ಅಲ್ಯುಮಿ ಅಸೋಸಿಯೇಶನ್ ಸಂಯುಕ್ತವಾಗಿ ಅಲೋಶಿಯನ್ ಅಲ್ಯುಮಿ ಪ್ರಶಸ್ತಿ -2025 ಕಾರ್ಯಕ್ರಮವನ್ನು ಮಾ. 8ರಂದು ಕಾಲೇಜಿನ ಎಲ್ಸಿಆರ್ಐ ಬ್ಲಾಕ್ನ ರಸ್ಕ್ವಿಂಹ ಸಭಾಂಗಣದಲ್ಲಿ ಆಯೋಜಿಸಿದೆ. ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 2025ರ ಅಲೋಶಿಯನ್ ಅಲ್ಯುಮ್ಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಹೇರಂಭಾ ಇಂಡಸ್ಟ್ರೀಸ್ ಲಿಮಿಟೆಡಂನ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ಸಿಐಒ ಆಫ್ ದಿ ಇಯರ್ ಪ್ರಶಸ್ತಿ ವಿಜೇತೆ ಲೂಸಿ ಮರಿಯಪ್ಪ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಬಹು ಪ್ರಶಸ್ತಿ ವಿಜೇತ ವಾಸ್ತುಶಿಲ್ಪಿ ಆಸ್ಕರ್ ಕಾಂಸೆಸಾವ್, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಮೂರು ಉದ್ಯಮಗಳನ್ನು ನಿರ್ವಹಿಸುತ್ತಿರುವ ಜೇಮ್ಸ್ ವಿನ್ಸೆಂಟ್ ಮೆಂಡೋನ್ಸಾರಿಗೆ ಪ್ರದಾನ ಮಾಡಲಾಗುವುದು ಎಂದು ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ರೆ.ಡಾ. ಪ್ರವೀಣ್ ಮಾರ್ಟಿಸ್ ಪ್ರೆಸ್ಕ್ಲಬ್ನಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಈ ಪ್ರಶಸ್ತಿಯಡಿ ಈಗಾಗಲೇ 45 ಜನ ಪ್ರಸಿದ್ದ ಅಲೋಶಿಯನ್ಗಳನ್ನು ಗೌರವಿಸಲಾಗಿದೆ. ಈ ಗೌರವಕ್ಕೆ ಪಾತ್ರರಾದ ಕೆಲವು ಗಣ್ಯ…