Author: admin

ನಿಂತಿಕಲ್ಲು, ಸೆ.. 2 : ನಿಂತಿಕಲ್ಲುವಿನಲ್ಲಿ ನಮ್ಮ ಶಾಖೆಯ ಉದ್ಘಾಟನೆ ಆಗಿರುವುದು ನನಗೆ ಸಂತಸ ತಂದಿದೆ. ಪಾರದರ್ಶಕ ಆಡಳಿತ ವ್ಯವಸ್ಥೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಸಂಸ್ಥೆಯು ಯಶಸ್ಸಿಯಾಗಿ ಬೆಳೆಯಲು ಸಾಧ್ಯ. ಗ್ರಾಹಕರು ಸಹಕಾರಿಯ ಜೀವಾಳ, ಮಾನವೀಯ ಮೌಲ್ಯ ಬಹಳಷ್ಟು ಶ್ರೇಷ್ಟವಾದುದು. ಸೇವೆ, ಸಹಕಾರ ಸಂಸ್ಥೆಯ ಮೂಲ ಉದ್ದೇಶವಾಗಿಸಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅವರು ಆ.30ರಂದು ನಿಂತಿಕಲ್ಲಿನ ಸಾಧನಾ ಸಹಾಕಾರ ಸೌಧದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕರಾದ ಭಾರತಿ ಜಿ. ಭಟ್ ರವರು ಮಾತನಾಡಿ ಗ್ರಾಮೀಣ ಜನರ ಸೇವೆಗಾಗಿ ಒಡಿಯೂರು ವಿವಿಧೋ ದೇಶ ಸಹಕಾರಿ ಸಂಸ್ಥೆಯು ಹುಟ್ಟಿಕೊಂಡಿದೆ. ಮಾನವೀಯ ಮೌಲ್ಯ ತುಂಬಿದ ಸಂಸ್ಥೆ ಇದಾಗಿದೆ ಎಂದು ಅವರು ಹೇಳಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಸಹಕಾರ ರತ್ನ ಎ. ಸುರೇಶ್…

Read More

ಮಂಗಳೂರು,ಸೆ.1 : ಶೆಫ್ ಟಾಕ್ ಮಂಗಳೂರು ಕಬ್ಬಡಿ ಪ್ರೀಮಿಯರ್ ಲೀಗ್ ಸೀಸನ್ – 2  ಇದರ ಕಬಡ್ಡಿ ಪಂದ್ಯಾಟ ಹಾಗೂ ಫುಡ್ ಫೆಸ್ಟಿವಲ್ ಮಂಗಳೂರಿನ  ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಿತು. ಆಗಸ್ಟ್ 30ರಂದು ಆಹಾರೋತ್ಸವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸಿದರು. ಆಗಸ್ಟ್ 31ರಂದು ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ. ಶ್ರೀ ವಿಶ್ವಾಸ್ ದಾಸ್. ಚಿಲಿಂಬಿ, ಲಯನ್ ಅನಿಲ್ ದಾಸ್ ಮಂಗಳೂರು, ಡಾಕ್ಟರ್ ಅನಂತ ಪ್ರಭು, ನಗರ ಪಾಲಿಕೆ ಸದಸ್ಯ ಕಿರಣ್ ಕುಮಾರ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಶಾನವಾಜ್, ಲಾಂಚು ಉಳ್ಳಾಲ್, ದೀಪಕ್ ಪಿಲಾರ್, ಮುಂತಾದ ಗಣ್ಯರು ಭಾಗವಹಿಸಿದ್ದರು. ವಿ.ಆರ್ ಯುನೈಟೆಡ್ ಅಧ್ಯಕ್ಷರಾದ ರಜಾಕ್ ಮಂಗ್ಳೂರ್, ಸುದೇಶ್ ಭಂಡಾರಿ, ಸುಕೇಶ್ ಭಂಡಾರಿ, ಕರುಣಾಕರ, ಮತ್ತು ಕ್ರೀಡಾ ಸಂಘಟಕರು ಉಪಸ್ಥಿತರಿದ್ದರು.

Read More

ಬೆಂಗಳೂರು, ಆ. 31 : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ ಆಗಿದೆ. ನಟ ದರ್ಶನ್ ಹಾಗೂ ಗ್ಯಾಂಗ್ ನ  ನ್ಯಾಯಾಂಗ ಅವಧಿ ಆಗಸ್ಟ್ 28ಕ್ಕೆ ಅಂತ್ಯಗೊಂಡಿದೆ. ಹೀಗಾಗಿ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿದೆ. ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 9ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ. ನ್ಯಾಯಾಧೀಶರು ಆರಂಭದಲ್ಲಿ ಎಲ್ಲರ ಹಾಜರಾತಿ ಪಡೆದರು. ಆ ಬಳಿಕ ಎಲ್ಲಾ ಆರೋಪಿಗಳಿಗೂ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

Read More

ಮಂಗಳೂರು, ಆ. 31: ನಗರದ ಪಂಪ್‌ವೆಲ್‌ನಲ್ಲಿರುವ ಇಂಡಿಯಾನ ಆಸ್ಪತ್ರೆ ಮತ್ತು ಹೃದಯ ಚಿಕಿತ್ಸಾ ಕೇಂದ್ರದಲ್ಲಿ ‘ಇಂಡಿಯಾನ ಕ್ಯಾನ್ಸರ್ ಸೆಂಟರ್’ ಆ.30 ಶುಕ್ರವಾರ ಉದ್ಘಾಟನೆಗೊಂಡಿತು. ಇಂಡಿಯಾನ ಕ್ಯಾನ್ಸರ್ ಸೆಂಟರ್ ಇದರ ಉದ್ಘಾಟನೆಯನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ನೆರವೇರಿಸಿದರು. ನಂತರ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ತಂತ್ರಜ್ಞಾನ ಬೆಳೆಯುತ್ತಿರುವಂತೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಹೊಸ ಸಂಶೋಧನೆಗಳು ನಡೆಯುತ್ತಿವೆ. ಆಧುನಿಕ ಕಾಲದಲ್ಲಿ ಜನರು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಬಯಸುತ್ತಾರೆ. ರಾಜ್ಯದ ಸರಕಾರಿ ಜಿಲ್ಲಾಸ್ಪತ್ರೆಗಳಲ್ಲಿ ‘ಕ್ಯಾನ್ಸರ್ ಡೇಕೇರ್ ಕಿಮೋ ಸೆಂಟರ್ ‘ಗಳನ್ನು ಮುಂದಿನ ತಿಂಗಳಿನಿಂದ ಆರಂಭಿಸಲಾಗುವುದು.ಜಿಲ್ಲೆ ಹಾಗೂ ಹೊರಗಿನವರಿಗೆ ಗುಣಮಟ್ಟದ ಚಿಕಿತ್ಸೆ ಇಂಡಿಯಾನದ ಮೂಲಕ ಲಭಿಸುವಂತಾಗಲಿ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ಯೂಸುಫ್ ಕುಂಬ್ಳೆ ಮಾತನಾಡಿ, ಇಂಡಿಯಾನ ಆಸ್ಪತ್ರೆಯಲ್ಲಿ ಸುಧಾರಿತ ಕ್ಯಾನ್ಸರ್ ಚಿಕಿತ್ಸೆಯ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದೆ. ಉತ್ತಮ, ಜನರಿಗೆ ಕೈಗೆಟುಕುವ ಕ್ಯಾನ್ಸರ್ ಆರೈಕೆಯನ್ನು ನೀಡುವ ಮೂಲಕ, ಇಂಡಿಯಾನ ಕ್ಯಾನ್ಸರ್ ಸೆಂಟರ್ ಈ ಪ್ರದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿನ…

Read More

ಕೋಟೆಕಾರು,ಆ. 30 : ಉಳ್ಳಾಲ ಕೋಟೆಕಾರು ಪಟ್ಟಣ ಪಂಚಾಯತ್ನ ಅಧ್ಯಕ್ಷರಾಗಿ ಬಿಜೆಪಿಯ ದಿವ್ಯ ಸತೀಶ್ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಪ್ರವೀಣ್ ಬಗಂಬಿಲ ಆಯ್ಕೆಯಾಗಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯತ್ನ ಅಧ್ಯಕ್ಷಗಾದಿಗೆ ಸಾಮಾನ್ಯ, ಉಪಾಧ್ಯಕ್ಷಗಾದಿಗೆ ಹಿಂದುಳಿದ ವರ್ಗ(ಎ) ಗೆ ಮೀಸಲಿರಿಸಲಾಗಿತ್ತು.ಕೋಟೆಕಾರು ಪಟ್ಟಣ ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಮದ್ಯಾಹ್ನ ಚುನಾವಣೆ ಪ್ರಕ್ರಿಯೆ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ದಿವ್ಯ ಸತೀಶ್ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಪ್ರವೀಣ್ ಬಗಂಬಿಲ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು ಡಿ.ಎ ಅವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

Read More

ಉಳ್ಳಾಲ,ಆ.29  : ಉಳ್ಳಾಲ ನಗರಸಭೆಯ ಅಧ್ಯಕ್ಷೆಯಾಗಿ ಕಾಂಗ್ರೆಸ್ಸಿನ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನ ಹರೀಶ್ ಅವರು ಆಯ್ಕೆಯಾಗಿದ್ದಾರೆ. ಉಳ್ಳಾಲ ನಗರ ಸಭೆಯ 2ನೇ ಆಡಳಿತಾವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಗರಸಭೆಯ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.ಚುನಾವಣೆಯಲ್ಲಿಅಧ್ಯಕ್ಷರಾಗಿ ಕಾಂಗ್ರೆಸ್ ನ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನಾ ಹರೀಶ್ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ)ದ ಮಹಿಳೆಗೆ ಮೀಸಲಿರಿಸಲಾಗಿತ್ತು. ಸಹಾಯಕ ಆಯುಕ್ತ ಹರ್ಷವರ್ಧನ್ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

Read More

ಮಂಗಳೂರು, ಆಗಸ್ಟ್ 29: ಫಿನಿಕ್ಸ್ ಫಿಲ್ಮ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ದಿ ಜರ್ನಿ ಆಫ್ ಬೆಳ್ಳಿ ಕನ್ನಡ ಚಿತ್ರವು  ಸೆ.13ರಂದು ತೆರೆ ಕಾಣಲಿದೆ ಎಂದು ಮಂಗಳವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಚಲನಚಿತ್ರದ ನಿರ್ಮಾಪಕ ಮಹೇಂದ್ರ ಕುಮಾರ್ ಅವರು ಹೇಳಿದರು. ಸೈನಿಕ ಮತ್ತು ಮಗಳ ಭಾಂದವ್ಯದ‌ ಮೇಲಿನ ಕಥೆ ಈ ಚಿತ್ರದಲ್ಲಿದೆ . ಪುಟ್ಟ ಬಾಲಕಿ ಬೆಳ್ಳಿಯ ಪಾತ್ರದಲ್ಲಿ ಎಸ್.ಪಾಟೀಲ್ ಅಭಿನಯಿಸಿದ್ದು, ಗೌರಿ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಅಡಿಶನ್‌ಗೆ ಬಂದಿದ್ದ 35 ಬಾಲ ಪ್ರತಿಭೆಗಳಲ್ಲಿ ಸಮನ್ವಿ ಯನ್ನು ಆಯ್ಕೆ ಮಾಡಲಾಗಿತ್ತು. ಬೆಳ್ಳಿ  ಚಿತ್ರದಲ್ಲಿ ಒಂದು ಹಾಡು ಇದೆ ಎಂದವರು ಹೇಳಿದರು. ಉತ್ತಮ ನಟನೆಯ ಮೂಲಕ ಚಿತ್ರಕ್ಕೆ ಸಮನ್ವಿ ಬಾಲ ನಟಿಯಾಗಿ ಜೀವ ತುಂಬಿದ್ದಾರೆ ಎಂದು ನಿರ್ದೇಶಕಿ ಗೌರಿ ಶ್ರೀನಿವಾಸ್ ಅವರು  ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ  ಅಮರ್‌ನಾಥ್ ರೈ, ರಾಜ್ ಗೋಪಾಲ್ ರೈ, ಶಂಕರ್, ಕಿರಣ್ ಕುಮಾರ್, ಮನೋಜ್ ಕುಮಾರ್ ಉಪಸ್ಥಿತರಿದ್ದರು.

Read More

ಮಂಗಳೂರು ,ಆ. 28 : ಸ್ಟಾರ್ ಕ್ರಿಯೆಶನ್ಸ್  ಬ್ಯಾನರಿನಡಿಯಲ್ಲಿ ತಯಾರಾದ  ರಾನಿ ಕನ್ನಡ  ಚಿತ್ರ  ಸೆಪ್ಟೆಂಬರ್ 12 ಕ್ಕೆ  ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ  ನಿರ್ದೇಶಕ ಗುರುತೇಜ್ ಶೆಟ್ಟಿ ಅವರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಹೇಳಿದರು. 92 ದಿನ ಬೆಂಗಳೂರು ಮತ್ತು ಮೈಸೂರುನ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಟ್ರೈಲರ್ ಸೆಪ್ಟಂಬರ್ 1 ಕ್ಕೆ ಬಿಡುಗಡೆಯಾಗಲಿದೆ. ಚಿತ್ರವು ಇದೇ ಆಗಸ್ಟ್ 30 ಕ್ಕೆ ಬಿಡುಗಡೆ ಯಾಗಬೇಕಿತ್ತು ಕಾರಣಾಂತರದಿಂದ 2 ವಾರ ಮುಂದಕ್ಕೆ ಹೋಗಿದೆ. ಚಿತ್ರಕ್ಕೆ   U/A ಸರ್ಟಿಫಿಕೇಟ ಸಿಕ್ಕಿದೆ ಎಂದು ಅವರು  ಹೇಳಿದರು. ರಾನಿ ಚಿತ್ರದ  ಕಥೆ-ಚಿತ್ರಕಥ-ಸಂಭಾಷಣೆ-ನಿರ್ದೇಶನ-ಗುರುತೇಜ್ ಶೆಟ್ಟಿ. ನಿರ್ಮಾಪಕರಾಗಿ  ಚಂದ್ರಕಾಂತ ಪೂಜಾರಿ,ಉಮೇಶ್ ಹೆಗ್ಡೆ,  ನಾಯಕನಾಗಿ  ಕಿರಣ್ ರಾಜ್.  ನಾಯಕಿರಾಗಿ ಅಪೂರ್ವ,ರಾಧ್ಯ,ಸಮೀಕ್ಷ.   ಸಹ ಕಲಾವಿದರು-ರವಿ ಶಂಕರ,ಗಿರೀಶ್ ಹೆಗ್ಡೆ,ಮೈಕೊ ನಾಗರಾಜ್,ಉಗ್ರಂ ಮಂಜು,ಉಗ್ರಂ ರವಿ,ಯಶ್ ಶೆಟ್ಟಿ,ಸುಜಯ್ ಶಾಸ್ತ್ರಿ,ಬಿ ಸುರೇಶ್,ಶ್ರೀಧರ್,ಲಕ್ಷ್ಮೀಸುಬ್ಬಯ್ಯ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ .

Read More

ಸುರತ್ಕಲ್, ಆಗಸ್ಟ್ 28 : ಮಂಗಳೂರು ಉತ್ತರ ವಿಧನಾ ಸಭಾ ಕ್ಷೇತ್ರದ ಸುರತ್ಕಲ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಿಸಾನ್ ಘಟಕದ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ “ಸೋಣ ಸೌಹಾರ್ದ ಕೆಸರ್ ದ ಪರ್ಬ”ವು ಭಾನುವಾರ ಮುಚ್ಚೂರು ಕೊಡಿಪಾಡಿಯ ಬ್ರಹ್ಮ ಬೈದರ್ಕಳ ಗರೋಡಿ ಮುಂಭಾಗದ ಗದ್ದೆಯಲ್ಲಿ ಆ.25, ಭಾನುವಾರ ನಡೆಯಿತು. ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೊಬೈಲ್ ಸಾಮಾಜಿಕ ಜಾಲತಾಣಗಳಲ್ಲೇ ತಲ್ಲೀನರಾಗಿರುವ ಯುವಜನರಲ್ಲಿ ತುಳುನಾಡಿದ ಸಂಸ್ಕೃತಿಯನ್ನು ಪರಿಚಯಿಸುವ ಜೊತೆಗೆ ಮುಂದಿನ ಪೀಳಿಗೆಗೂ ಉಳಿಸುವ ಕೆಲಸ ಇಂದಿನ ಸೋಣ ಸೌಹಾರ್ದ ಕೆಸರ್ ದ ಪರ್ಬ ದಿಂದ ಆಗಿದೆ. ಈ ಸೌಹಾರ್ದ ಕಾರ್ಯಕ್ರಮವನ್ನು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಮುಂದಿನ ದಿನಗಳಲ್ಲೂ ಆಯೋಜಿಸಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಬ್ರಹ್ಮ ಬೈದರ್ಕಳ ಗರೋಡಿಯ ಜಗನ್ನಾಥ ಅತ್ತಾರ್, ಡಾ. ಗುತ್ತಿನಾರ್ ರವಿರಾಜ್ ಶೆಟ್ಟಿ ತುಳುನಾಡಿನ ಸಂಸ್ಕೃತಿಯ ಕುರಿತು ಮಾತನಾಡಿದರು.…

Read More

ಮಂಗಳೂರು, ಆಗಸ್ಟ್ 28: ಕದ್ರಿಯ ಶ್ರೀಕ್ಷೇತ್ರ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀಕೃಷ್ಣ ವೇಷ ಸ್ಪರ್ಧೆಯು ಆಗಸ್ಟ್ 26, ಸೋಮವಾರದಂದು  ನಡೆಯಿತು. ಮಂಗಳೂರು ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜಿ ಮಹಾರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಕಾರ್ಯಕ್ರಮಕ್ಕೆ  ಶುಭ ಹಾರೈಸಿದರು . ವೇದಿಕೆಯಲ್ಲಿ ಉಪಸ್ಥಿತರಿದ್ದ  ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮಿನಾರಾಯಣ ಆಸ್ರಣ್ಣ  ಅವರು  ಕಾರ್ಯಕ್ರಮಕ್ಕೆ  ಶುಭ ಹಾರೈಸಿದರು. 20ಕ್ಕೂ ಹೆಚ್ಚು ಹಸುಗೂಸುಗಳನ್ನು ತೊಟ್ಟಿಲಲ್ಲಿ ತೂಗುವ ಮೂಲಕ ಈ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಶರವು ರಾಘವೇಂದ್ರ ಶಾಸ್ತ್ರಿ, ಎ.ಜೆ.ಶೆಟ್ಟಿ, ನಿತಿನ್ ಕುಮಾರ್, ರತ್ನಾಕರ ಜೈನ್, ಜಿ.ಕೆ.ಭಟ್ ಸೇರಾಜೆ, ಶಕೀಲಾ ಕಾವ, ಭುವನಾಭಿರಾಮ ಉಡುಪ, ವಿಜಯಲಕ್ಷ್ಮಿ ಶೆಟ್ಟಿ, ಮಂಜುಳಾ ಶೆಟ್ಟಿ, ಜ್ಯೂಲಿಯೆಟ್, ಜಯಮ್ಮ, ಮತ್ತಿತರರು ಉಪಸ್ಥಿತರಿದ್ದರು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಂತರ  ಶ್ರೀಕೃಷ್ಣ ವೇಷ ಸ್ಪರ್ಧೆ  ನಡೆಯಿತು.…

Read More